top of page
News Articles
Sathyapatha News Plus


ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ಮಂಗಳೂರಿನಿಂದ ಕೊಲ್ಲಿ ರಾಷ್ಟ್ರಗಳಿಗೆ ಸಂಚರಿಸುವ ಎಲ್ಲಾ ವಿಮಾನ ರದ್ದು
ಮಂಗಳೂರು: ಅಮೆರಿಕ ಹಾಗೂ ಇಸ್ರೇಲ್ ದಾಳಿಗಳ ನಂತರ ಇರಾನ್ ತನ್ನ ಆಗಸದಲ್ಲಿ ನಾಗರಿಕ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಿರುವ ಪರಿಣಾಮ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಲ್ಲಿ ರಾಷ್ಟ್ರಗಳಿಗೆ ತೆರಳುವ ಹಾಗೂ ಅಲ್ಲಿಂದ ಮಂಗಳೂರಿಗೆ ಆಗಮಿಸುವ ಹಲವು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದಲ್ಲಿ ಗಂಭೀರ ವ್ಯತ್ಯಯ ಉಂಟಾಗಿದೆ. ದುಬೈಗೆ ತೆರಳುತ್ತಿದ್ದ ವಿಮಾನ ಹಿಂತಿರುಗು ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ಐಎಕ್ಸ್ 831 (IXE–DXB) ವಿಮಾನವು ಮಧ್ಯಾಹ್ನ 3 ಗಂಟೆಗೆ ಹಾರಾಟಕ್ಕಾಗಿ ರನ್ವೇ ಕಡೆಗೆ ಚಲಿಸಿತ್ತು. ಇದೇ ವೇಳೆ ಇರಾನ್ ತನ್ನ ವಾಯುಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ತಾತ್ಕಾಲಿ
Feb 281 min read


‘ಆಪರೇಷನ್ ರೈಸಿಂಗ್ ಲಯನ್’: ಇಸ್ರೇಲ್ನಲ್ಲಿ 48 ಗಂಟೆಗಳ ತುರ್ತು ಪರಿಸ್ಥಿತಿ ಘೋಷಣೆ
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಗರಿಷ್ಠ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ‘ಆಪರೇಷನ್ ರೈಸಿಂಗ್ ಲಯನ್’ (Operation Rising Lion) ಹೆಸರಿನಲ್ಲಿ ಇರಾನ್ನ ಪರಮಾಣು ಹಾಗೂ ಕ್ಷಿಪಣಿ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದ ಸಂದೇಶದಲ್ಲಿ ಮಾತನಾಡಿದ ನೆತನ್ಯಾಹು, ಅಮೆರಿಕ ಜೊತೆಗೆ ಸಂಯುಕ್ತವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಇರಾನ್ನಿಂದ ಎದುರಾಗುತ್ತಿರುವ “ಅಸ್ತಿತ್ವದ ಭೀತಿ”ಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ. 48 ಗಂಟೆಗಳ ತುರ್ತು ಪರಿ
Feb 281 min read


ಅಬುಧಾಬಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ವಿಟ್ಲದ ಶ್ರೀಲಕ್ಷ್ಮಿ
ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಚಿನ್ನ, ಎರಡು ಬೆಳ್ಳಿ, ಒಂದು ಕಂಚು ಪದಕ ಜಯ ಅಬುಧಾಬಿ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಕ್ರೀಡಾಪಟುಗಳು ಮಿಂಚುತ್ತಿರುವಾಗ, ಪ್ರತಿಭಾವಂತ ಈಜುಗಾರ್ತಿ ಶ್ರೀಲಕ್ಷ್ಮಿ ಅವರು ವಿಶಿಷ್ಟ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. International Masters Games Association ವತಿಯಿಂದ ಆಯೋಜಿಸಲ್ಪಟ್ಟ ಕ್ರೀಡಾಕೂಟವು Mohammed Bin Zayed City Swimming Pool ನಲ್ಲಿ ನಡೆಯಿತು. ವಿಶ್ವದ ವಿವಿಧ ದೇಶಗಳಿಂದ ಭಾಗವಹಿಸಿದ್ದ ಪ್ರತಿಭಾವಂತ ಈಜುಗಾರರ ನಡುವೆ ಶ್ರೀಲಕ್ಷ್ಮಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ನಾಲ್ಕು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 200 ಮೀ
Feb 141 min read


ಭಾರತ-ಪಾಕ್ ಕ್ರಿಕೆಟ್ ಸಮರ ರದ್ದು; ಬಾಂಗ್ಲಾ ಪರ ನಿಂತ ಪಾಕ್ ಪ್ರಧಾನಿ ಶೆಹಬಾಝ್ ಷರೀಫ್
ಮುಂಬರುವ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ನಲ್ಲಿ ಕ್ರಿಕೆಟ್ ಲೋಕದ ಹೈವೋಲ್ಟೇಜ್ ಪಂದ್ಯವೆಂದೇ ಪರಿಗಣಿಸಲ್ಪಟ್ಟಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹಣಾಹಣಿ ರದ್ದಾಗುವುದು ಬಹುತೇಕ ಖಚಿತವಾಗಿದೆ. ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಲಿದೆ ಎಂದು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಬಾರಿಯ ವಿಶ್ವಕಪ್ನಿಂದ ಬಾಂಗ್ಲಾದೇಶ ತಂಡವನ್ನು ಹೊರಗಿಟ್ಟಿರುವ ಐಸಿಸಿ ಕ್ರಮವನ್ನು ಖಂಡಿಸಿ, ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸಲು ಪಾಕಿಸ್ತಾನ ಈ ಆಘಾತಕಾರಿ ನಿರ್ಧಾರ ಕೈಗೊಂಡಿದೆ ಎಂದು ಪಾಕ್ ಸಂಸತ್ತಿನ ಕ್ಯಾಬಿನೆಟ್ ಸಭೆಯಲ್ಲಿ ತಿಳಿಸಲಾಗಿದೆ. ಬಾಂಗ್ಲಾ
Feb 51 min read


ಅಬುಧಾಬಿ ಬಿಗ್ ಟಿಕೆಟ್ ಲಾಟರಿಯಲ್ಲಿ ಉಡುಪಿಯ ಶಂತನುಗೆ 49 ಕೋಟಿ ರೂ. ಜಾಕ್ಪಾಟ್!
ಅಬುಧಾಬಿಯ ಪ್ರತಿಷ್ಠಿತ 'ಬಿಗ್ ಟಿಕೆಟ್' ಲಾಟರಿಯಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರು ಕೋಟ್ಯಂತರ ರೂಪಾಯಿ ಗೆಲ್ಲುವ ಮೂಲಕ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ಮಸ್ಕತ್ನಲ್ಲಿ ರಿಟೇಲ್ ವಲಯದಲ್ಲಿ ಕೆಲಸ ಮಾಡುತ್ತಿರುವ ಉಡುಪಿಯ ಉದ್ಯಾವರ ಮೂಲದ 33 ವರ್ಷದ ಶಂತನು ಶೆಟ್ಟಿಗಾರ್ ಅವರು ಬರೋಬ್ಬರಿ 49 ಕೋಟಿ ರೂಪಾಯಿ (20 ಮಿಲಿಯನ್ ದಿರಮ್) ಬಹುಮಾನ ಗೆದ್ದ ಅದೃಷ್ಟವಂತ ಕನ್ನಡಿಗ. ಫೆಬ್ರವರಿ 3ರಂದು ನಡೆದ ಲಾಟರಿ ಡ್ರಾದಲ್ಲಿ ಶಂತನು ಖರೀದಿಸಿದ್ದ 305810 ಸಂಖ್ಯೆಯ ಟಿಕೆಟ್ಗೆ ಈ ಬೃಹತ್ ಮೊತ್ತ ಒಲಿದಿದೆ. ವಿಶೇಷವೆಂದರೆ, ಶಂತನು ಈ ಟಿಕೆಟನ್ನು ತನ್ನ ಸ್ನೇಹಿತನೊಂದಿಗೆ ಜಂಟಿಯಾಗಿ ಖರೀದಿಸಿದ್ದರು
Feb 51 min read


ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: ಲಂಡನ್-ಬೆಂಗಳೂರು ಹಾರಾಟ ರದ್ದು
ಬೆಂಗಳೂರು: ಲಂಡನ್ನಿಂದ ಬೆಂಗಳೂರಿಗೆ ಬರಬೇಕಿದ್ದ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನದ ಇಂಧನ ನಿಯಂತ್ರಣ ಸ್ವಿಚ್ನಲ್ಲಿ (Fuel Control Switch) ದೋಷ ಕಂಡುಬಂದ ಹಿನ್ನೆಲೆಯಲ್ಲಿ ಸೋಮವಾರ ವಿಮಾನದ ಹಾರಾಟವನ್ನು ರದ್ದುಗೊಳಿಸಲಾಗಿದೆ. ಪೈಲಟ್ ನೀಡಿದ ದೋಷದ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಏರ್ ಇಂಡಿಯಾ ಸಂಸ್ಥೆಯು, ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದೆ. ಕಳೆದ ವರ್ಷ ಅಹಮದಾಬಾದ್ನಲ್ಲಿ ನಡೆದ ವಿಮಾನ ಅಪಘಾತದ ತನಿಖೆ ಚಾಲ್ತಿಯಲ್ಲಿರುವಾಗಲೇ ಈ ಘಟನೆ ನಡೆದಿರುವುದು ಆತಂಕ ಮೂಡಿಸಿದೆ. ಈ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (DGCA) ಮಾಹಿತಿ ನೀಡಲಾಗಿದ್ದು, ಅವರ ನಿರ
Feb 31 min read


ಅಮೆರಿಕದಿಂದ ಭಾರತದ ಸರಕುಗಳ ಮೇಲಿನ ಸುಂಕ ಭಾರಿ ಕಡಿತ: ಮೋದಿಯವರಿಂದ ಟ್ರಂಪ್ಗೆ ಧನ್ಯವಾದ
ವಾಷಿಂಗ್ಟನ್/ನವದೆಹಲಿ: ಯುರೋಪಿಯನ್ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲಿನ ಆಮದು ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಿದ್ದಾರೆ. ರಷ್ಯಾದಿಂದ ಕಚ್ಚಾತೈಲ ಆಮದು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ವಿಧಿಸಲಾಗಿದ್ದ ದಂಡವೂ ಸೇರಿ ಒಟ್ಟು 50% ರಷ್ಟಿದ್ದ ಸುಂಕವನ್ನು ಈಗ ಕೇವಲ 18% ಕ್ಕೆ ಇಳಿಸಲಾಗಿದೆ. ಈ ಐತಿಹಾಸಿಕ ತೀರ್ಮಾನದಿಂದಾಗಿ ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಅಮೆರಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಆದ್ಯತೆ ಲಭಿಸಿದಂತಾಗಿದೆ. ಈ ನಿರ್ಧಾರವನ್ನು ಸ
Feb 31 min read


ಸೌದಿ ಉಮ್ರಾ ವೀಸಾ ನಿಯಮದಲ್ಲಿ ಭಾರಿ ಬದಲಾವಣೆ: ಹಜ್ ಸಿದ್ಧತೆ ಹಿನ್ನೆಲೆ ಯಾತ್ರಿಕರಿಗೆ ಹೊಸ ಡೆಡ್ಲೈನ್ ಫಿಕ್ಸ್!"
ಸೌದಿ ಅರೇಬಿಯಾ ಸರ್ಕಾರವು ಉಮ್ರಾ ಯಾತ್ರಿಕರಿಗಾಗಿ ಹೊಸ ವೀಸಾ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಯಾತ್ರೆಯ ಅವಧಿ ಮತ್ತು ವೀಸಾ ಮಾನ್ಯತೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಹಜ್ ಯಾತ್ರೆಯ ಸಿದ್ಧತೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಸೌದಿ ಸಚಿವಾಲಯದ ಆದೇಶದಂತೆ ಉಮ್ರಾ ವೀಸಾ ಹೊಂದಿರುವ ಯಾತ್ರಿಕರು ದುಲ್-ಖಾದ್ 1, 1447 ಹಿಜ್ರಿಯೊಳಗೆ ಕಡ್ಡಾಯವಾಗಿ ದೇಶವನ್ನು ತೊರೆಯಬೇಕಿದೆ. ಉಮ್ರಾ ವೀಸಾ ಪಡೆದವರು ಸೌದಿಗೆ ಆಗಮಿಸಲು ಶವ್ವಾಲ್ 15, 1447 ಹಿಜ್ರಿಯನ್ನು ಅಂತಿಮ ಗಡುವು ಎಂದು ನಿಗದಿಪಡಿಸಲಾಗಿದೆ. ವೀಸಾ ಮಾನ್ಯತೆಯ ಅವಧಿಯ ಬಗ್ಗೆಯೂ ಸಚಿವಾಲಯವು ಪ್ರಮುಖ ಸ್ಪಷ್
Jan 261 min read


ಬಾಂಗ್ಲಾದಲ್ಲಿ ಮತ್ತೆ ಮೃತ್ಯು ನರ್ತನ: ಗ್ಯಾರೇಜ್ಗೆ ಬೆಂಕಿ ಹಚ್ಚಿ ಹಿಂದೂ ಯುವಕನ ಸಜೀವ ದಹನ!
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ನರಸಿಂಗ್ಲಿ ಜಿಲ್ಲೆಯಲ್ಲಿ 23 ವರ್ಷದ ಹಿಂದೂ ಯುವಕ ಚಂಚಲ್ ಚಂದ್ರ ಭೌಮಿಕ್ ಎಂಬುವವರನ್ನು ಅವರು ಮಲಗಿದ್ದ ಗ್ಯಾರೇಜ್ ಒಳಗೇ ಸುಟ್ಟು ಹಾಕಿರುವ ಭೀಕರ ಘಟನೆ ನಡೆದಿದೆ. ಮೂಲತಃ ಕುಮಿಲ್ಲಾ ಜಿಲ್ಲೆಯ ಲಕ್ಷ್ಮೀಪುರ ಗ್ರಾಮದವರಾದ ಚಂಚಲ್, ಕೆಲಸದ ನಿಮಿತ್ತ ನರಸಿಂಗ್ಲಿಯಲ್ಲಿ ವಾಸವಿದ್ದರು. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಏಕೈಕ ಪುತ್ರನನ್ನೇ ಕಳೆದುಕೊಂಡ ಕುಟುಂಬ ಈಗ ಬೀದಿಗೆ ಬಿದ್ದಂತಾಗಿದ್ದು, ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾ
Jan 251 min read


ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಗುಡ್ಬೈ: ಜಿನೀವಾ ಕಚೇರಿಯಲ್ಲಿ ಯುಎಸ್ ಧ್ವಜ ತೆರವು, 98 ವರ್ಷಗಳ ನಂಟಿಗೆ ಬ್ರೇಕ್!
ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಅಮೆರಿಕ ಅಧಿಕೃತವಾಗಿ ಹೊರಬಂದಿದೆ. ಈ ನಿರ್ಧಾರದ ಬೆನ್ನಲ್ಲೇ ಜಿನೀವಾದಲ್ಲಿರುವ WHO ಕಚೇರಿಯಿಂದ ಅಮೆರಿಕದ ಧ್ವಜವನ್ನು ತೆರವುಗೊಳಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಸ್ಥೆಯು ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ಅಗತ್ಯ ಸುಧಾರಣೆಗಳನ್ನು ತರುವಲ್ಲಿ ಮಂದಗತಿ ತೋರಿದೆ ಎಂದು ಗಂಭೀರವಾಗಿ ಆರೋಪಿಸಿರುವ ಅಮೆರಿಕ, ತನ್ನ ಸದಸ್ಯತ್ವವನ್ನು ರದ್ದುಗೊಳಿಸುವ ಮೂಲಕ ಕಠಿಣ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಅಮೆರಿಕವು ರೋಗಗಳ ಕಣ್ಗಾವಲು ಮತ್ತು ನಿರ
Jan 231 min read


ಅಮೆರಿಕದ ದ್ವಿದಳ ಧಾನ್ಯಗಳ ಮೇಲಿನ ಸುಂಕ ಕಡಿತಕ್ಕೆ ಟ್ರಂಪ್ಗೆ ಸೆನೆಟರ್ಗಳ ಮನವಿ: ಭಾರತದೊಂದಿಗೆ ಮಾತುಕತೆಗೆ ಒತ್ತಾಯ
ವಾಷಿಂಗ್ಟನ್: ಭಾರತವು ಅಮೆರಿಕದ ದ್ವಿದಳ ಧಾನ್ಯಗಳ (ಪಲ್ಸ್ಗಳು) ಆಮದಿನ ಮೇಲೆ ವಿಧಿಸಿರುವ ಶೇ.30ರಷ್ಟು ಸುಂಕದಿಂದ ಅಮೆರಿಕದ ರೈತರಿಗೆ ಭಾರಿ ನಷ್ಟವಾಗುತ್ತಿದೆ ಎಂದು ಉತ್ತರ ಡಕೋಟಾ ಮತ್ತು ಮೊಂಟಾನಾ ರಾಜ್ಯಗಳ ಸೆನೆಟರ್ಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿ, ಸುಂಕವನ್ನು ಕಡಿಮೆ ಮಾಡುವಂತೆ ಒತ್ತಾಯಿಸಬೇಕು ಎಂದು ಸೆನೆಟರ್ಗಳು ಪತ್ರ ಬರೆದಿದ್ದಾರೆ. ಜಗತ್ತಿನ ಒಟ್ಟು ದ್ವಿದಳ ಧಾನ್ಯಗಳ ಬಳಕೆಯಲ್ಲಿ ಭಾರತವು ಶೇ.27ರಷ್ಟು ದೊಡ್ಡ ಮಾರುಕಟ್ಟೆಯನ್ನು ಹೊಂದಿದ್ದು, ಅಮೆರಿಕದ ಹಳದಿ ಬ
Jan 181 min read


ಇರಾನ್ನಿಂದ ತಾಯ್ನಾಡಿಗೆ ಮರಳಿದ ಭಾರತೀಯರು: ದೆಹಲಿ ವಿಮಾನ ನಿಲ್ದಾಣದಲ್ಲಿ ಭಾವುಕ ಕ್ಷಣಗಳು
ಹೊಸದಿಲ್ಲಿ: ಇರಾನ್ನಲ್ಲಿ ನಡೆಯುತ್ತಿರುವ ವ್ಯಾಪಕ ಆಡಳಿತ ವಿರೋಧಿ ಪ್ರತಿಭಟನೆ ಹಾಗೂ ಅಸ್ಥಿರತೆಯ ನಡುವೆ, ಅಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಭಾರತೀಯರ ತಂಡವೊಂದು ಶುಕ್ರವಾರ ತಡರಾತ್ರಿ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದಿದೆ. ತಾಯ್ನಾಡಿಗೆ ಮರಳಿದ ತಮ್ಮ ಬಂಧುಗಳನ್ನು ಸ್ವಾಗತಿಸಲು ಜನವರಿ 16ರಂದು ವಿಮಾನ ನಿಲ್ದಾಣದಲ್ಲಿ ಅಪಾರ ಸಂಖ್ಯೆಯ ಜನರು ನೆರೆದಿದ್ದರು. ಇರಾನ್ನಲ್ಲಿ ಹಣದುಬ್ಬರ ಮತ್ತು ಕರೆನ್ಸಿ ಮೌಲ್ಯ ಕುಸಿತದಿಂದ ಆರಂಭವಾದ ಪ್ರತಿಭಟನೆಯು ಭೀಕರ ಸ್ವರೂಪ ಪಡೆದುಕೊಂಡಿದ್ದು, ಅಲ್ಲಿನ ಪರಿಸ್ಥಿತಿ ಆತಂಕಕಾರಿಯಾಗಿದ
Jan 181 min read


ಶ್ವೇತಭವನದಲ್ಲಿ ಟ್ರಂಪ್-ಮಚಾಡೊ ಭೇಟಿ: ಅಮೆರಿಕ ಅಧ್ಯಕ್ಷರಿಗೆ ನೊಬೆಲ್ ಪದಕ ಅರ್ಪಿಸಿದ ವೆನೆಝುವೆಲಾ ನಾಯಕಿ!
ವಾಷಿಂಗ್ಟನ್: ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ ಶ್ವೇತಭವನದಲ್ಲಿ ವೆನೆಝುವೆಲಾದ ವಿರೋಧ ಪಕ್ಷದ ಪ್ರಬಲ ನಾಯಕಿ ಮಾರಿಯಾ ಕೊರಿನಾ ಮಚಾಡೊ ಅವರನ್ನು ಭೇಟಿ ಮಾಡಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಈ ಸುದೀರ್ಘ ಸಭೆಯಲ್ಲಿ, ಮಚಾಡೊ ಅವರು ತಮಗೆ ಸಂದಿದ್ದ ನೊಬೆಲ್ ಶಾಂತಿ ಪ್ರಶಸ್ತಿಯ ಪದಕವನ್ನು ಅಧ್ಯಕ್ಷ ಟ್ರಂಪ್ ಅವರಿಗೆ ಗೌರವಪೂರ್ವಕವಾಗಿ ಪ್ರದಾನ ಮಾಡಿದರು. ವೆನೆಝುವೆಲಾದ ಸ್ವಾತಂತ್ರ್ಯ ಹೋರಾಟಕ್ಕೆ ಟ್ರಂಪ್ ನೀಡುತ್ತಿರುವ ಬೆಂಬಲಕ್ಕಾಗಿ ಈ ಗೌರವ ಸಮರ್ಪಿಸಿರುವುದಾಗಿ ಮಚಾಡೊ ತಿಳಿಸಿದ್
Jan 161 min read


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಒಲಿದ ನೊಬೆಲ್ ಶಾಂತಿ ಪುರಸ್ಕಾರ: ಮಾರಿಯಾ ಮಚಾದೊ ಅವರಿಂದ ವಿಶಿಷ್ಟ ಗೌರವ
ವಾಷಿಂಗ್ಟನ್: ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆಯೊಂದರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿದೆ. ವಿಶೇಷವೆಂದರೆ, ವೆನೆಜುವೆಲಾದ ವಿರೋಧ ಪಕ್ಷದ ಪ್ರಬಲ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ತಮಗೆ ಸಂದ ನೊಬೆಲ್ ಶಾಂತಿ ಪುರಸ್ಕಾರವನ್ನು ಅಧ್ಯಕ್ಷ ಟ್ರಂಪ್ ಅವರಿಗೆ ಗೌರವ ಸೂಚಕವಾಗಿ ಅರ್ಪಿಸಿದ್ದಾರೆ. * ಗೌರವ ಸಮರ್ಪಣೆ: ವಾಷಿಂಗ್ಟನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾರಿಯಾ ಮಚಾದೊ, ತಮ್ಮ ಪಾಲಿನ ನೊಬೆಲ್ ಪುರಸ್ಕಾರವನ್ನು ಡೊನಾಲ್ಡ್ ಟ್ರಂಪ್ ಅವರಿಗೆ ಪ್ರದಾನ ಮಾಡಿರುವುದಾಗಿ ಘೋಷಿಸಿದರು. * ರಹಸ್ಯವಾಗಿ ಉಳ
Jan 161 min read


ಇರಾನ್ನಲ್ಲಿ ಭುಗಿಲೆದ್ದ ಆಕ್ರೋಶ: 350ಕ್ಕೂ ಹೆಚ್ಚು ಮಸೀದಿಗಳಿಗೆ ಬೆಂಕಿ, 650 ಸಾವು
ಟೆಹ್ರಾನ್: ಇರಾನ್ನಲ್ಲಿ ಮುಲ್ಲಾ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಈಗ ಹಿಂಸಾತ್ಮಕ ರೂಪ ಪಡೆದಿದೆ. ಆರ್ಥಿಕ ಮುಗ್ಗಟ್ಟು, ವಿಪರೀತ ಬೆಲೆ ಏರಿಕೆ ಮತ್ತು ಕಟ್ಟುನಿಟ್ಟಿನ ಧಾರ್ಮಿಕ ನಿಯಮಗಳ ವಿರುದ್ಧ ಆರಂಭವಾದ ಈ ಹೋರಾಟವು ಇಡೀ ದೇಶವನ್ನು ವ್ಯಾಪಿಸಿದೆ. ಪ್ರತಿಭಟನಾಕಾರರು ಆಡಳಿತದ ಸಂಕೇತವೆಂದು ಪರಿಗಣಿಸಲಾದ ಸುಮಾರು 350ಕ್ಕೂ ಹೆಚ್ಚು ಮಸೀದಿಗಳಿಗೆ ಬೆಂಕಿ ಹಚ್ಚಿದ್ದು, ಪರಿಸ್ಥಿತಿ ಕೈಮೀರುತ್ತಿದೆ. ಇರಾನ್ನ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಈ ಆಡಳಿತ ವಿರೋಧಿ ದಂಗೆಯಲ್ಲಿ ಈವರೆಗೆ 650ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ವಿದೇ
Jan 131 min read


ಅಮೆರಿಕದ 500% ಟ್ಯಾರಿಫ್ ಬೆದರಿಕೆ: ಭಾರತದ ವ್ಯಾಪಾರಕ್ಕೆ ಹೊಸ ಸವಾಲು
ರಷ್ಯಾ ವಿರುದ್ಧದ ಕಠಿಣ ನಿರ್ಬಂಧಗಳ ಮಸೂದೆಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ, ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ 500% ವರೆಗೆ ಟ್ಯಾರಿಫ್ ವಿಧಿಸುವ ಸಾಧ್ಯತೆ ಎಂಬ ವಿಚಾರ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಕ್ರಮದ ವ್ಯಾಪ್ತಿಗೆ ಭಾರತ ಸೇರಬಹುದೆಂಬ ಅಂದಾಜುಗಳು ವ್ಯಾಪಾರ ವಲಯದಲ್ಲಿ ಆತಂಕ ಮೂಡಿಸಿವೆ. ಹಿನ್ನೆಲೆ ರಷ್ಯಾ–ಉಕ್ರೇನ್ ಯುದ್ಧ ಮುಂದುವರಿದಿರುವ ಸಂದರ್ಭದಲ್ಲೇ, ರಷ್ಯಾದ ಇಂಧನ ಆದಾಯವನ್ನು ಕಡಿತಗೊಳಿಸುವ ಉದ್ದೇಶದಿಂದ ಅಮೆರಿಕ ಸಂಸತ್ತುನಲ್ಲಿ ಹೊಸ ನಿರ್ಬಂಧ ಮಸೂದೆ ಪ್ರಸ್ತಾಪವಾಗಿದೆ. ಈ ಮಸೂದೆ ಜಾರಿಯಾದಲ್ಲಿ
Jan 81 min read


ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಸಾಲುಸಾಲು ಹತ್ಯೆ: ಭಾರತದಿಂದ ತೀವ್ರ ಕಳವಳ
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ಹಿಂಸಾಚಾರ ತೀವ್ರಗೊಂಡಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ. ಜನವರಿ 5ರಂದು ಒಂದೇ ದಿನ ಕೇವಲ ನಾಲ್ಕು ಗಂಟೆಗಳ ಅಂತರದಲ್ಲಿ ಇಬ್ಬರು ಹಿಂದೂಗಳನ್ನು ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಲಭ್ಯವಿರುವ ಮಾಹಿತಿಯಂತೆ, ಕಳೆದ 35 ದಿನಗಳ ಅವಧಿಯಲ್ಲಿ ಒಟ್ಟು 11 ಹಿಂದೂಗಳು ಹತ್ಯೆಯಾಗಿದ್ದಾರೆ. ಇದರ ಜೊತೆಗೆ ಹಿಂದೂ ಸಮುದಾಯದ ಮೇಲೆ ದೌರ್ಜನ್ಯ, ಹಲ್ಲೆ ಮತ್ತು ಬೆದರಿಕೆ ಪ್ರಕರಣಗಳು ಹೆಚ್ಚುತ್ತಿರುವುದು ತಿಳಿದುಬಂದಿದೆ. ಇತ್ತೀಚೆಗೆ ವಿಧವೆ ಮಹಿಳೆಯೊಬ್ಬರ ಮೇಲೆ ಗುಂಪು ಅತ್ಯಾಚಾರ ನಡೆದಿರುವ ಘಟನೆ ಕೂಡ ವರದಿಯಾಗಿದ್ದು, ಮಾನವ ಹಕ್ಕುಗಳ ಸ್ಥಿತ
Jan 81 min read


ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಸರಣಿ ಹತ್ಯೆ: 24 ಗಂಟೆಗಳಲ್ಲಿ ಮೂವರ ಬಲಿ
ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಗಳು ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಮೂವರು ಹಿಂದೂಗಳನ್ನು ಹತ್ಯೆ ಮಾಡಲಾಗಿದೆ. ತಾಜಾ ಘಟನೆಯಲ್ಲಿ ನರಸಿಂಗ್ಲಿ ಜಿಲ್ಲೆಯ ದಿನಸಿ ಅಂಗಡಿ ಮಾಲೀಕ ಮೋನಿ ಚಕ್ರವರ್ತಿ ಎಂಬುವವರನ್ನು ಕಿಡಿಗೇಡಿಗಳು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಸೋಮವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಅಂಗಡಿಯಲ್ಲಿದ್ದ ಮೋನಿ ಅವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಲಾಗಿದ್ದು, ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇದಕ್ಕೂ ಕೆಲವು ಗಂಟೆಗಳ ಮೊದಲು ಜಶೋರ್ ಜಿಲ್ಲೆಯ
Jan 61 min read


ವಿಮಾನ ಪ್ರಯಾಣಿಕರಿಗೆ ಶಾಕ್: ಪವರ್ಬ್ಯಾಂಕ್ಗಳನ್ನು ಸಂಪೂರ್ಣ ನಿಷೇಧಿಸಿದ ಡಿಜಿಸಿಎ!
ಹೊಸದಿಲ್ಲಿ: ವಿಮಾನ ಪ್ರಯಾಣದ ವೇಳೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಪವರ್ಬ್ಯಾಂಕ್ಗಳನ್ನು ವಿಮಾನದೊಳಗೆ ಕೊಂಡೊಯ್ಯುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಪವರ್ಬ್ಯಾಂಕ್ಗಳನ್ನು ಹ್ಯಾಂಡ್ ಬ್ಯಾಗ್ಗಳಲ್ಲಿ ಕೊಂಡೊಯ್ಯಲು ಅವಕಾಶವಿತ್ತು. ಆದರೆ, ಇನ್ನು ಮುಂದೆ ಚೆಕ್-ಇನ್ ಲಗೇಜ್ ಮಾತ್ರವಲ್ಲದೆ, ಹ್ಯಾಂಡ್ ಬ್ಯಾಗ್ಗಳಲ್ಲೂ ಪವರ್ಬ್ಯಾಂಕ್ ಅಥವಾ ಯಾವುದೇ ರೀತಿಯ ಹೆಚ್ಚುವರಿ ಲೀಥಿಯಂ ಬ್ಯಾಟರಿಗಳನ್ನು ಕೊಂಡೊಯ್ಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಪವರ್ಬ್ಯಾಂಕ್ಗಳಲ್ಲಿ ಬಳಸಲಾಗುವ ಲೀಥಿಯಂ ಬ್ಯಾಟರಿಗಳು ತಾಂತ
Jan 51 min read


ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಪುತ್ರಿಯ ಅದ್ಧೂರಿ ವಿವಾಹ: ಸೋದರನ ಮಗನನ್ನೇ ಅಳಿಯನನ್ನಾಗಿ ಮಾಡಿಕೊಂಡ ಜನರಲ್!
ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ತಮ್ಮ ಮೂರನೇ ಪುತ್ರಿ ಮದ್ದೂರ್ ಅವರನ್ನು ತಮ್ಮದೇ ಸೋದರ ಕಾಸಿಮ್ ಮುನೀರ್ ಅವರ ಪುತ್ರ ಅಬ್ದುಲ್ ರೆಹಮಾನ್ ಜೊತೆ ವಿವಾಹ ಮಾಡಿಕೊಟ್ಟಿದ್ದಾರೆ. ಈ ಮೂಲಕ ಮುನೀರ್ ಅವರು ತಮ್ಮ ಅಣ್ಣನ ಮಗನನ್ನೇ ಅಳಿಯನನ್ನಾಗಿ ಸ್ವೀಕರಿಸಿದ್ದಾರೆ. ಡಿಸೆಂಬರ್ 26 ರಂದು ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿಯಲ್ಲಿ (GHQ) ಈ ವಿವಾಹ ಮಹೋತ್ಸವವು ಅತ್ಯಂತ ಅದ್ಧೂರಿಯಾಗಿ ನೆರವೇರಿದೆ. ಜನರಲ್ ಮುನೀರ್ ಅವರಿಗೆ ಒಟ್ಟು ನಾಲ್ಕು ಹೆಣ್ಣು ಮಕ್ಕಳಿದ್ದು, ಇದು ಅವರ ಮೂರನೇ ಮಗಳ ವಿವಾಹವಾಗಿದೆ. ಸೇನಾ ಪ್ರಧಾನ ಕಚೇರಿಯಲ್ಲಿ ನಡೆದ ಈ ಹೈ-ಪ್ರೊಫೈಲ್
Jan 11 min read
Archive
bottom of page



