top of page
News Articles
Sathyapatha News Plus


ಪಿಜಿ ಮತ್ತು ಹಾಸ್ಟೆಲ್ಗಳ ತಪಾಸಣೆಗೆ ಸಚಿವ ಯು.ಟಿ. ಖಾದರ್ ಸೂಚನೆ
ಬೆಂಗಳೂರು: ಹೋಟೆಲ್ ಹಾಗೂ ಆಹಾರ ತಯಾರಿಕಾ ಘಟಕಗಳ ಮೇಲಿನ ದಾಳಿಯ ನಂತರ, ಇದೀಗ ರಾಜ್ಯದಲ್ಲಿರುವ ಪೇಯಿಂಗ್ ಗೆಸ್ಟ್ (ಪಿಜಿ) ಮತ್ತು ಸರ್ಕಾರಿ ಹಾಸ್ಟೆಲ್ಗಳ ತಪಾಸಣೆ ನಡೆಸುವಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಆಹಾರ ಮತ್ತು ಔಷಧಿ ಆಡಳಿತ (ಎಫ್ಡಿಎ) ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪಿಜಿಗಳಲ್ಲಿ ನೀಡುವ ಆಹಾರದಲ್ಲಿ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗುತ್ತಿರುವ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಇಲಾಖೆಯು ನಿಯಮ ಪಾಲಿಸದ ಹೋಟೆಲ್ಗಳಿಗೆ ಭಾರೀ ದಂಡ ವಿಧಿಸಿದೆ. ಇದೀಗ ಆಹಾರ ಇಲಾಖೆಯ ಕ್ಯೂಆರ್ ಕೋಡ್ ಮತ್ತು ಸಾರ್ವಜನಿಕರ ದೂರುಗಳ ಆಧಾರದ ಮೇಲೆ ಅಧಿಕಾರಿ
Sep 21 min read


ರಾಜ್ಯದಲ್ಲಿ ಕೃತಕ ಪನ್ನೀರ್ಗೆ ಒಂದು ವರ್ಷದ ನಿಷೇಧ: ಆಹಾರ ಇಲಾಖೆ ಮಹತ್ವದ ಆದೇಶ
ಬೆಂಗಳೂರು: ರಾಜ್ಯದಲ್ಲಿ ಕೃತಕ ಪನ್ನೀರ್ ಬಳಕೆ ಹಾಗೂ ಮಾರಾಟಕ್ಕೆ ಒಂದು ವರ್ಷದವರೆಗೆ ನಿಷೇಧ ಹೇರಲಾಗಿದೆ. ಗ್ರಾಹಕರಿಗೆ ಕೃತಕ ಪನ್ನೀರ್ ನೀಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಈ ಕ್ರಮ ಕೈಗೊಂಡಿದೆ. ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಆಹಾರ ವಲಯದಲ್ಲಿ ಪನ್ನೀರ್ ಬಳಸುವವರು ಕೇವಲ ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳಿಂದ ತಯಾರಿಸಿದ ನೈಸರ್ಗಿಕ ಪನ್ನೀರ್ನ್ನೇ ಬಳಸಬೇಕು ಎಂದು ಇಲಾಖೆ ಸೂಚಿಸಿದೆ. ಕೃತಕ ಪನ್ನೀರ್ ಎಂದರೆ ನೈಸರ್ಗಿಕ ಹಾಲಿನ ಪನ್ನೀರ್ಗೆ ಬದಲಾಗಿ ಸಸ್ಯಜನ್ಯ ಎಣ್ಣೆ, ಪಿಷ್ಟ, ಕೃತಕ ಬಣ್ಣಗಳು ಅಥವಾ ಇತರೆ ಪದಾರ್ಥಗಳನ್ನ
Aug 221 min read


ಕರ್ನಾಟಕದಲ್ಲಿ ಗುಟ್ಕಾ, ತಂಬಾಕು–ನಿಕೋಟಿನ್ ಪಾನ್ ಮಸಾಲಾ ಒಂದು ವರ್ಷ ಬ್ಯಾನ್
ಬೆಂಗಳೂರು: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ತಂಬಾಕು ಮತ್ತು/ಅಥವಾ ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಒಂದು ವರ್ಷದ ಅವಧಿಗೆ ನಿಷೇಧ ಹೇರಿದೆ. ಕರ್ನಾಟಕ ಆಹಾರ ಸುರಕ್ಷತಾ ಆಯುಕ್ತರು ಜೂನ್ 15, 2026ರಂದು ಹೊರಡಿಸಿರುವ ಅಧಿಸೂಚನೆಯಂತೆ, ತಂಬಾಕು ಅಥವಾ ನಿಕೋಟಿನ್ ಒಳಗೊಂಡಿರುವ ಗುಟ್ಕಾ ಹಾಗೂ ಪಾನ್ ಮಸಾಲಾಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಉತ್ಪನ್ನದ ಹೆಸರು ಅಥವಾ ಬ್ರ್ಯಾಂಡ್ ಯಾವುದೇ ಆಗಿದ್ದರೂ, ಅದರಲ್ಲಿ ತಂಬಾಕು ಅಥವಾ ನಿಕೋಟಿನ್ ಇದ್ದರೆ ಈ ನಿಷೇಧ ಅನ್ವಯವಾಗಲಿದೆ
Aug 121 min read


ಆಟಿ ಅಮಾವಾಸ್ಯೆ 2026: ನಾಳೆ ಕರಾವಳಿಯಲ್ಲಿ ಆಟಿ ಅಮಾವಾಸ್ಯೆ; ‘ಪಾಲೆದ ಕಷಾಯ’ದ ಮಹತ್ವ, ತಯಾರಿಸುವ ವಿಧಾನ ಇಲ್ಲಿದೆ
ಮಂಗಳೂರು: ತುಳುನಾಡಿನ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳಲ್ಲಿ ಆಟಿ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಆಷಾಢ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುವ ಈ ಹಬ್ಬವು ಕರಾವಳಿಯ ಜನಜೀವನದೊಂದಿಗೆ ಆಳವಾಗಿ ಬೆಸೆದುಕೊಂಡಿದೆ. ಈ ಬಾರಿ ಆಗಸ್ಟ್ 12ರಂದು ಆಟಿ ಅಮಾವಾಸ್ಯೆ ಆಚರಿಸಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಸೇರಿದಂತೆ ತುಳುನಾಡಿನ ವಿವಿಧ ಭಾಗಗಳಲ್ಲಿ ಆಟಿ ಅಮಾವಾಸ್ಯೆಯ ದಿನ ಹಲವು ಸಾಂಪ್ರದಾಯಿಕ ಆಚರಣೆಗಳು ನಡೆಯಲಿವೆ. ಅವುಗಳಲ್ಲಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ‘ಪಾಲೆದ ಕಷಾಯ’ ಸೇವಿಸುವ ಸಂಪ್ರದಾಯ ಅತ್ಯಂತ ಪ್ರಮುಖವಾಗಿದೆ. ಆಟಿ ಅಮಾವಾಸ್ಯೆಗೆ ಏಕೆ ವಿಶೇಷ ಮಹತ್ವ?
Aug 112 min read


ಔಷಧಿ ಬೆಲೆ ಇಳಿಕೆ: ಬಡ, ಮಧ್ಯಮ ವರ್ಗದವರಿಗೆ ಕೇಂದ್ರದ ಸಿಹಿ ಸುದ್ದಿ!
ಪ್ರತಿ ತಿಂಗಳು ಔಷಧಿಗಳಿಗೆ ಸಾವಿರಾರು ರೂಪಾಯಿ ವೆಚ್ಚ ಮಾಡುತ್ತಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ವಿವಿಧ ದೀರ್ಘಕಾಲೀನ ಕಾಯಿಲೆಗಳಿಗೆ ಬಳಸುವ ಒಟ್ಟು 39 ಅಗತ್ಯ ಔಷಧಿಗಳ ಚಿಲ್ಲರೆ ಬೆಲೆಗೆ ಗರಿಷ್ಠ ಮಿತಿಯನ್ನು ನಿಗದಿಪಡಿಸಿ ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ (NPPA) ಮಹತ್ವದ ಆದೇಶ ಹೊರಡಿಸಿದೆ. ಈ ಹೊಸ ನಿಯಮವನ್ನು ಡ್ರಗ್ಸ್ ಆದೇಶ–2013 (DPCO) ಅಡಿಯಲ್ಲಿ ಜಾರಿಗೆ ತರಲಾಗಿದ್ದು, ಔಷಧ ಕಂಪನಿಗಳು ಇನ್ನು ಮುಂದೆ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗ
Jul 111 min read


ಕೇರಳದಲ್ಲಿ ಹೊಸ ವೈರಸ್ ಪತ್ತೆ : ನಾಲ್ಕು ವರ್ಷದ ಬಾಲಕಿ ಸಾವು, ಆರೋಗ್ಯ ಇಲಾಖೆ ಕಟ್ಟೆಚ್ಚರ
ಕೇರಳದಲ್ಲಿ ಅಪಾಯಕಾರಿ 'ಶಿಗೆಲ್ಲಾ' ಬ್ಯಾಕ್ಟೀರಿಯಾ ಸೋಂಕು ತೀವ್ರವಾಗಿ ಹರಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಕೋಝಿಕ್ಕೋಡ್ ಜಿಲ್ಲೆಯ ನಾಲ್ಕು ವರ್ಷದ ನೀಲಾ ಎಂಬ ಬಾಲಕಿ ಈ ಸೋಂಕಿಗೆ ಬಲಿಯಾಗಿದ್ದಾಳೆ. ವಯನಾಡ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನೂರಾರು ಜನರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಹಲವು ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಗೆಲ್ಲಾ ಮುಖ್ಯವಾಗಿ ಕಲುಷಿತ ನೀರು, ಅಸ್ವಚ್ಛ ಆಹಾರ ಮತ್ತು ಕಳಪೆ ನೈರ್ಮಲ್ಯದಿಂದ ಹರಡುವ ಕರುಳಿನ ಸೋಂಕಾಗಿದೆ. ತೀವ್ರ ಅತಿಸಾರ, ಜ್ವರ, ಹೊಟ್ಟೆನೋವು ಮತ್ತು ವಾಂತಿ ಇದರ ಪ್ರಮುಖ ಲಕ್ಷಣಗಳಾಗಿವೆ. ಮಕ
Jun 91 min read


ಅತಿಯಾದ ಬೆವರಿನ ವಾಸನೆಗೆ ಪರಿಹಾರ: ಆಲಂ ಕಲ್ಲಿನ ಸರಳ ಬಳಕೆ ಪರಿಣಾಮಕಾರಿ
ಮನೆಯಲ್ಲೇ ಸಿಗುವ ನೈಸರ್ಗಿಕ ವಿಧಾನದಿಂದ ದೇಹದ ದುರ್ವಾಸನೆ ನಿಯಂತ್ರಣ ಸಾಧ್ಯ ಇಂದಿನ ವೇಗದ ಜೀವನಶೈಲಿ, ಬಿಸಿಲಿನ ತಾಪಮಾನ ಮತ್ತು ಹೆಚ್ಚುತ್ತಿರುವ ದೇಹದ ಬೆವರು ಸಮಸ್ಯೆಯಿಂದ ಅನೇಕರು ದುರ್ವಾಸನೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ದೊರೆಯುವ ಡಿಯೋಡರೆಂಟ್ಗಳ ಜೊತೆಗೆ, ಮನೆಯಲ್ಲೇ ಸಿಗುವ ನೈಸರ್ಗಿಕ ವಿಧಾನಗಳು ಕೂಡ ಪರಿಣಾಮಕಾರಿ ಎಂದು ತಜ್ಞರು ತಿಳಿಸಿದ್ದಾರೆ. ಅಂತಹ ವಿಧಾನಗಳಲ್ಲಿ ಪ್ರಮುಖವಾದುದು ಆಲಂ ಕಲ್ಲು (ಫಿಟ್ಕರಿ) ಬಳಕೆ. ಇದು ಆಂಟಿ-ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು, ಬೆವರುದಿಂದ ಉಂಟಾಗುವ ದುರ್ವಾಸನೆಗೆ ಕಾರಣವಾಗುವ ಜೀವಾಣುಗಳನ್ನು ಕಡಿಮೆ ಮಾಡುತ್ತದೆ. ಸ
Apr 231 min read


ಹೆಸರಘಟ್ಟದಲ್ಲಿ ಹಕ್ಕಿ ಜ್ವರ ದೃಢ: ಬೆಂಗಳೂರಿನಲ್ಲಿ ಹೈ ಅಲರ್ಟ್
ಬೆಂಗಳೂರಿನ ಹೆಸರಘಟ್ಟದ ಸರ್ಕಾರಿ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ (H5N1) ಪತ್ತೆಯಾಗಿದ್ದು, ರಾಜ್ಯದಾದ್ಯಂತ ತೀವ್ರ ಹೈ ಅಲರ್ಟ್ ಘೋಷಿಸಲಾಗಿದೆ. ಇಲ್ಲಿಂದಲೇ ರಾಜ್ಯದ ವಿವಿಧ ಭಾಗಗಳಿಗೆ ಕೋಳಿಗಳು ಸರಬರಾಜಾಗಿರುವುದು ಆತಂಕ ಮೂಡಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ಒಂದು ಕಿಲೋಮೀಟರ್ ವ್ಯಾಪ್ತಿಯ ಕೋಳಿಗಳನ್ನು ನಾಶಪಡಿಸಲು ಪಶುಸಂಗೋಪನಾ ಇಲಾಖೆ ನಿರ್ಧರಿಸಿದೆ. ಸಾರ್ವಜನಿಕರು ಆತಂಕಪಡದೆ ಜಾಗರೂಕರಾಗಿರಲು ಸೂಚಿಸಲಾಗಿದೆ. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಕನಿಷ್ಠ 70°C ಗಿಂತ ಹೆಚ್ಚಿನ ತಾಪಮಾನದಲ್ಲಿ ಚೆನ್ನಾಗಿ ಬೇಯಿಸಿ ಸೇವಿಸಬೇಕು. ಹಕ್ಕಿಗಳ ಅಸಹಜ ಸಾವು ಕಂಡುಬಂದಲ್ಲಿ ಕೂಡಲೇ
Apr 171 min read


ಏಪ್ರಿಲ್ 1ರಿಂದ ಅಗತ್ಯ ಔಷಧಗಳ ಬೆಲೆ ಏರಿಕೆ
ಕೇಂದ್ರ ಸರ್ಕಾರವು ಅಗತ್ಯ ಔಷಧಗಳ ವಾರ್ಷಿಕ ಬೆಲೆ ಪರಿಷ್ಕರಣೆಯನ್ನು ಪ್ರಕಟಿಸಿದ್ದು, ಏಪ್ರಿಲ್ 1, 2026ರಿಂದ ಜಾರಿಗೆ ಬರಲಿದೆ. ಈ ಹೊಸ ನಿಯಮದಂತೆ ಸುಮಾರು 1,000ಕ್ಕೂ ಹೆಚ್ಚು ಔಷಧಗಳ ಬೆಲೆಯಲ್ಲಿ ಶೇಕಡ 0.6 ರಷ್ಟು ಏರಿಕೆಯಾಗಲಿದೆ. ಇದರಿಂದಾಗಿ ಸಾಮಾನ್ಯ ಜನರಿಗೆ ಔಷಧಗಳ ವೆಚ್ಚ ಸ್ವಲ್ಪ ಮಟ್ಟಿಗೆ ಹೆಚ್ಚಾಗುವ ಸಾಧ್ಯತೆಯಿದೆ. ಮುಖ್ಯವಾಗಿ ನೋವು ನಿವಾರಕಗಳು, ಆಂಟಿಬಯಾಟಿಕ್ಸ್, ಮಧುಮೇಹ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಗಳ ದರ ಏರಲಿದೆ. ಸೋಂಕು ನಿವಾರಕಗಳೂ ಈ ಪಟ್ಟಿಯಲ್ಲಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಈಗ ಆರೋಗ್ಯ ರಕ್ಷಣೆಯೂ ದುಬಾರಿಯಾಗಲಿದೆ. ಜನಸಾಮಾನ್ಯರ ಮೇಲೆ ಇದ
Mar 201 min read


ಐತಿಹಾಸಿಕ ತೀರ್ಪು: ಹರೀಶ್ ರಾಣಾಗೆ ಸುಪ್ರೀಂ ಕೋರ್ಟ್ನಿಂದ 'ಪರೋಕ್ಷ ದಯಾಮರಣ' ಅನುಮತಿ
13 ವರ್ಷಗಳಿಂದ ಕೋಮಾದಲ್ಲಿದ್ದ 32 ವರ್ಷದ ಹರೀಶ್ ರಾಣಾ ಅವರಿಗೆ ಗೌರವಯುತವಾಗಿ ಸಾಯಲು ಸುಪ್ರೀಂ ಕೋರ್ಟ್ ಐತಿಹಾಸಿಕ ಅನುಮತಿ ನೀಡಿದೆ. ಚೇತರಿಕೆಯ ಸಾಧ್ಯತೆಯಿಲ್ಲದ ಕಾರಣ, ಅವರಿಗೆ ನೀಡಲಾಗುತ್ತಿರುವ ಕೃತಕ ಆಹಾರ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಹಿಂಪಡೆಯಲು ನ್ಯಾಯಾಲಯವು ಹಸಿರು ನಿಶಾನೆ ತೋರಿಸಿದೆ. ಈ ಹಿಂದೆ ಕೇವಲ ವೆಂಟಿಲೇಟರ್ಗಳಂತಹ ವ್ಯವಸ್ಥೆ ತೆಗೆಯಲು ಮಾತ್ರ ಅವಕಾಶವಿತ್ತು. ಆದರೆ, ಈ ತೀರ್ಪಿನ ಮೂಲಕ 'ಫೀಡಿಂಗ್ ಟ್ಯೂಬ್' ಮೂಲಕ ಜೀವ ಬೆಂಬಲ ಪಡೆಯುತ್ತಿರುವ ರೋಗಿಗಳಿಗೂ ದಯಾಮರಣ ಅನ್ವಯಿಸಬಹುದು ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಸ್
Mar 111 min read


ಸರ್ಕಾರಿ ಆಸ್ಪತ್ರೆಗಳ ಓಪಿಡಿ ಬಂದ್: ರೋಗಿಗಳಿಗೆ ಚಿಕಿತ್ಸೆ ಆತಂಕ
ಕರ್ನಾಟಕದ ಸರ್ಕಾರಿ ವೈದ್ಯರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಾರ್ಚ್ 11 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ನಿರ್ಧಾರದಿಂದಾಗಿ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳ ಹೊರರೋಗಿ ವಿಭಾಗ (OPD) ಸೇವೆಗಳು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಆರೋಗ್ಯ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ಜ್ವರ, ಕೆಮ್ಮು ಹಾಗೂ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವವರು ಪರದಾಡುವಂತಾಗಿದೆ. ಕೇವಲ ವೈದ್ಯಕೀಯ ತಪಾಸಣೆ ಮಾತ್ರವಲ್ಲದೆ, ರಕ್ತ ಪರೀಕ್ಷೆ ಹಾಗೂ ಸ್ಕ್ಯಾನಿಂಗ್ನಂತಹ ಅಗತ್
Mar 101 min read
Archive
bottom of page



