top of page
News Articles
Sathyapatha News Plus


ಚೀನಾದಲ್ಲಿ ಪ್ರವಾಹ: ವಸತಿ ಪ್ರದೇಶಗಳಿಗೆ ನುಗ್ಗಿದ 900 ವಿಷಕಾರಿ ಹಾವುಗಳು, ಜನರಲ್ಲಿ ಆತಂಕ
ಚೀನಾದ ಗುವಾಂಗ್ಕ್ಸಿ ಪ್ರಾಂತ್ಯದಲ್ಲಿ ಸುರಿದ ಭಾರೀ ಮಳೆ ಹಾಗೂ ಭೀಕರ ಪ್ರವಾಹದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪ್ರವಾಹದ ನೀರು ವಾಣಿಜ್ಯ ಹಾವು ಸಾಕಣೆ ಕೇಂದ್ರಗಳಿಗೆ ನುಗ್ಗಿದ ಪರಿಣಾಮ, ಸುಮಾರು 900ಕ್ಕೂ ಹೆಚ್ಚು ವಿಷಕಾರಿ ಹಾವುಗಳು ಪಂಜರಗಳಿಂದ ತಪ್ಪಿಸಿಕೊಂಡು ವಸತಿ ಪ್ರದೇಶಗಳಿಗೆ ನುಗ್ಗಿವೆ. ಪ್ರವಾಹದ ನೀರಿನಲ್ಲೇ ಹಾವುಗಳು ಈಜಾಡುತ್ತಿರುವುದು ಕಂಡುಬಂದಿದ್ದು, ರಸ್ತೆ ಹಾಗೂ ಮನೆಗಳಿಗೂ ನುಗ್ಗುತ್ತಿರುವುದರಿಂದ ಸ್ಥಳೀಯ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಹೆಂಗ್ಝೌ ನಗರದಲ್ಲಿ ಹಾವಿನ ಕಡಿತಕ್ಕೊಳಗಾದ ಮಹಿಳೆಯೊಬ್ಬರು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಗುವಾಂಗ್
6 days ago1 min read


ಕೊಲಂಬೊ ಜೈಲಿನಲ್ಲಿ ಕೈದಿಗಳ ಭೀಕರ ಜಗಳ: 25 ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ
ಶ್ರೀಲಂಕಾದ ಕೊಲಂಬೊದ ನೆಗೊಂಬೊ ಜೈಲಿನಲ್ಲಿ ಕೈದಿಗಳ ಎರಡು ಗುಂಪುಗಳ ನಡುವೆ ಭೀಕರ ಘರ್ಷಣೆ ಸಂಭವಿಸಿದೆ. ಈ ಗಲಾಟೆಯ ತೀವ್ರ ಪರಿಣಾಮವಾಗಿ ಕನಿಷ್ಠ 25 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಕೈದಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳು ಹಾಗೂ ವಿಚಾರಣಾಧೀನ ಕೈದಿಗಳ ನಡುವೆ ಭಾನುವಾರವೇ ಈ ಗಲಾಟೆ ಆರಂಭವಾಗಿತ್ತು. ಆದರೆ, ಇಷ್ಟೊಂದು ದೊಡ್ಡ ಮಟ್ಟದ ರಕ್ತಸಿಕ್ತ ಘರ್ಷಣೆಗೆ ನಿಖರವಾದ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಘಟನೆಯ ನಂತರ ಜೈಲಿನ ಮುಖ್ಯ ದ್ವಾರದ ಹೊರಗೆ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಗಾಯಗೊಂಡವರನ್ನು ಪೊಲೀಸ್
Jul 71 min read


BREAKING: ಪಾಕಿಸ್ತಾನದಲ್ಲಿ ಜೆಎಫ್-17 ಯುದ್ಧ ವಿಮಾನ ಪತನ – ಇಬ್ಬರು ಪೈಲಟ್ಗಳ ಸ್ಥಿತಿ ಅನುಮಾನ
ಪಾಕಿಸ್ತಾನದಲ್ಲಿ ಜೆಎಫ್-17 ಯುದ್ಧ ವಿಮಾನ ಪತನಗೊಂಡ ಘಟನೆ ಮತ್ತೆ ಆತಂಕ ಸೃಷ್ಟಿಸಿದೆ. ಮಿಯಾನ್ವಾಲಿ ಜಿಲ್ಲೆಯ ಕಮ್ರಾ ಕಾಲನ್ ಸಮೀಪ ಈ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಮಾಹಿತಿಯ ಪ್ರಕಾರ, ತರಬೇತಿ ಹಾರಾಟದ ವೇಳೆ ಈ ಜೆಎಫ್-17 ಯುದ್ಧ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ವಿಶೇಷವಾಗಿ ಎಂಜಿನ್ನಲ್ಲಿ ಉಂಟಾದ ಸಮಸ್ಯೆಯಿಂದ ವಿಮಾನ ನಿಯಂತ್ರಣ ತಪ್ಪಿ ಪತನಗೊಂಡಿದೆ ಎನ್ನಲಾಗಿದೆ. ಘಟನೆಯ ಸಮಯದಲ್ಲಿ ವಿಮಾನದಲ್ಲಿ ಇಬ್ಬರು ಪೈಲಟ್ಗಳು ಇದ್ದರು. ಅವರ ಸ್ಥಿತಿಯ ಕುರಿತು ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ರಕ್ಷಣಾ ಪಡೆಗಳು ಮತ್ತು ತುರ್ತು ಸೇವಾ ತಂಡಗಳು ಸ್ಥಳಕ್ಕೆ ದೌಡಾಯಿ
May 201 min read


ರಾಜ್ಯಾದ್ಯಂತ ಇಂಧನ ಮಾರಾಟಕ್ಕೆ ಹೊಸ ಮಾರ್ಗಸೂಚಿ: ಕ್ಯಾನ್, ಬಾಟಲಿಗಳಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟ ನಿಷೇಧ
ರಾಜ್ಯದಲ್ಲಿ ಇಂಧನ ಕೊರತೆಯಾಗದಂತೆ ತಡೆಯಲು ಮತ್ತು ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪೆಟ್ರೋಲಿಯಂ ನಿಯಮಗಳು 2002ರ ಅನ್ವಯ, ಇಂಧನ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹೊಸ ನಿಯಮದಂತೆ, ಪೆಟ್ರೋಲ್ ಬಂಕ್ಗಳಲ್ಲಿ ಇಂಧನವನ್ನು ಕೇವಲ ವಾಹನಗಳ ಟ್ಯಾಂಕ್ಗಳಿಗೆ ಮಾತ್ರ ತುಂಬಿಸಬೇಕು. ಬಾಟಲಿ, ಕ್ಯಾನ್ ಅಥವಾ ಇತರ ಕಂಟೇನರ್ಗಳಲ್ಲಿ ಪೆಟ್ರೋಲ್-ಡೀಸೆಲ್ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಾಹನಗಳಿಗೆ ಅಥವಾ ಅಧಿಕೃತ ಕ
May 131 min read


ಭಾರತದತ್ತ ಬರುತ್ತಿದ್ದ ಹಡಗು ವಶಕ್ಕೆ: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ದಾಳಿ
ಗುಜರಾತ್ ಮುಂದ್ರಾ ಬಂದರಿಗೆ ತೆರಳುತ್ತಿದ್ದ ಹಡಗಿನ ಮೇಲೆ ಗುಂಡಿನ ದಾಳಿ – ಸಿಬ್ಬಂದಿ ಸುರಕ್ಷಿತ ಮಧ್ಯಪ್ರಾಚ್ಯದ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಾರ್ಮುಜ್ ಜಲಸಂಧಿಯಲ್ಲಿ ಎರಡು ವಾಣಿಜ್ಯ ಹಡಗುಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ವಶಪಡಿಸಿಕೊಂಡ ಹಡಗುಗಳಲ್ಲಿ MSC FRANCESCA ಮತ್ತು EPAMINODES ಸೇರಿವೆ. ಮೆರೈನ್ ಟ್ರಾಫಿಕ್ ಮಾಹಿತಿಯ ಪ್ರಕಾರ, ಲೈಬೀರಿಯನ್ ಧ್ವಜ ಹೊಂದಿದ್ದ EPAMINODES ಹಡಗು ಭಾರತದಲ್ಲಿನ ಗುಜರಾತ್ ರಾಜ್ಯದ ಮುಂದ್ರಾ ಬಂದರಿಗೆ ಸಾಗುತ್ತಿತ್ತು. ಘಟನೆಯ ವೇಳೆ ಹಡಗಿನ ಮೇಲೆ ಸಣ್ಣ ಶಸ್ತ್ರ
Apr 221 min read


ಇರಾನ್-ಇಸ್ರೇಲ್ ಸಂಘರ್ಷ: ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ
ಇರಾನ್ ಮೇಲಿನ ಬಾಂಬ್ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ಇಸ್ರೇಲ್ನ ಸರ್ಕಾರಿ ಮಾಧ್ಯಮ 'ಕಾನ್' ಕೂಡ ಇಸ್ರೇಲ್ ಈ ಕದನ ವಿರಾಮಕ್ಕೆ ಸಮ್ಮತಿಸಿದೆ ಎಂದು ದೃಢಪಡಿಸಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಸುದೀರ್ಘ ಮಾತುಕತೆಗಳ ನಂತರ ಈ ಮಹತ್ವದ ಬೆಳವಣಿಗೆ ನಡೆದಿದ್ದು, ಪಶ್ಚಿಮ ಏಷ್ಯಾದಲ್ಲಿ ಸದ್ಯಕ್ಕೆ ಉದ್ವಿಗ್ನತೆ ಕಡಿಮೆಯಾಗುವ ಮುನ್ಸೂಚನೆ ಲಭಿಸಿದೆ. ಇರಾನ್ನ ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಈ ಒಪ್ಪಂದಕ್ಕೆ ಅಂತಿಮ ಅನುಮೋದನೆ ನೀಡಿದ
Apr 81 min read


ಇರಾನ್ ನಾಗರೀಕತೆಗೆ ಅಂತ್ಯ ಹಾಡುತ್ತಾ ಅಮೆರಿಕ? ಟ್ರಂಪ್ 'ಡೆಡ್ಲೈನ್' ಆತಂಕ!
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಯುದ್ಧದ ಅಂಚಿಗೆ ಬಂದು ನಿಂತಿದೆ. ಇರಾನ್ ನಿಯಂತ್ರಣದಲ್ಲಿರುವ ಆಯಕಟ್ಟಿನ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವಂತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕಡpriority ಎಚ್ಚರಿಕೆ ನೀಡಿದ್ದಾರೆ. ನಿಗದಿತ ಸಮಯದೊಳಗೆ ಜಲಸಂಧಿ ತೆರೆಯದಿದ್ದರೆ ಇಡೀ ನಾಗರೀಕತೆಯನ್ನೇ ಅಂತ್ಯಗೊಳಿಸುವುದಾಗಿ ಅವರು ಗುಡುಗಿದ್ದಾರೆ. ಇರಾನ್ನಲ್ಲಿ ಸಂಪೂರ್ಣ ಆಡಳಿತ ಬದಲಾವಣೆಯ ಗುರಿ ಹೊಂದಿರುವ ಅಮೆರಿಕ, ಅಲ್ಲಿನ ಮೂಲಭೂತವಾದಿ ಆಡಳಿತವನ್ನು ಕಿತ್ತೊಗೆಯಲು ಸನ್ನದ್ಧವಾಗಿದೆ. ಕಳೆದ 47 ವರ್ಷಗಳ ಭ್ರಷ್ಟಾಚಾರ ಮತ್ತು ಅತಿಕ್ರಮಣಕ್ಕೆ ಅಂತ್ಯ ಹಾಡುವುದಾಗಿ ಟ್ರಂಪ್ ತಮ್ಮ ಸೋಶಿಯಲ
Apr 71 min read


ಏಳು ವರ್ಷಗಳ ಬಳಿಕ ಇರಾನ್ನಿಂದ ಭಾರತಕ್ಕೆ ತೈಲ ಆಮದು
ಏಳು ವರ್ಷಗಳ ಸುದೀರ್ಘ ಬಿಡುವಿನ ನಂತರ ಭಾರತವು ಇರಾನ್ನಿಂದ ಮತ್ತೆ ಕಚ್ಚಾತೈಲ ಖರೀದಿಸಲು ಮುಂದಾಗಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿಯ ಮೂಲಕ ಸರಕು ಸಾಗಣೆಯಲ್ಲಿ ಉಂಟಾಗಿರುವ ವ್ಯತ್ಯಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 2019ರ ಮೇ ನಂತರ ಟೆಹರಾನ್ನಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದು ಇದೇ ಮೊದಲು ಎಂದು ತೈಲ ಸಚಿವಾಲಯ ತಿಳಿಸಿದೆ. ವಿಶ್ವದ ಮೂರನೇ ಅತಿದೊಡ್ಡ ತೈಲ ಬಳಕೆದಾರ ರಾಷ್ಟ್ರವಾಗಿರುವ ಭಾರತವು ಪ್ರಸ್ತುತ 40ಕ್ಕೂ ಹೆಚ್ಚು ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ಸಂಘರ್ಷದ ಸಂದರ್ಭದಲ್ಲಿ ಇಂಧನ ಭದ್ರತೆಯನ್ನು
Apr 51 min read


ಔಷಧ ವಲಯದಲ್ಲಿ ಟ್ರಂಪ್ ಸಂಚಲನ: ಬ್ರಾಂಡೆಡ್ ಔಷಧಿಗಳ ಮೇಲೆ 100% ಆಮದು ಸುಂಕ ವಿಧಿಸಲು ಆದೇಶ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ರಾಂಡೆಡ್ ಔಷಧಗಳ ಮೇಲೆ ಶೇ. 100ರಷ್ಟು ಭಾರಿ ಸುಂಕ ವಿಧಿಸುವ ಮಹತ್ವದ ಕಾರ್ಯಾದೇಶಕ್ಕೆ ಸಹಿ ಹಾಕಿದ್ದಾರೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪೇಟೆಂಟ್ ಹೊಂದಿರುವ ಔಷಧಗಳ ಮೇಲೆ ಈ ಸುಂಕ ಅನ್ವಯವಾಗಲಿದ್ದು, ಪ್ರಮುಖವಾಗಿ ಚೀನಾದಂತಹ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಈ ಕಟ್ಟುನಿಟ್ಟಿನ ಕ್ರಮದ ಮೂಲಕ ಔಷಧ ತಯಾರಿಕಾ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಅಮೆರಿಕಕ್ಕೆ ಸ್ಥಳಾಂತರಿಸುವಂತೆ ಒತ್ತಡ ಹೇರಲಾಗುತ್ತಿದೆ. ಇದರಿಂದ ದೇಶದೊಳಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮತ್ತು ಸ್ಥಳೀಯವಾಗಿ ಔಷಧ ಉತ್ಪಾದನೆಗೆ ಹೆಚ್ಚಿನ
Apr 31 min read


ಪಾಕಿಸ್ತಾನದಲ್ಲಿನ ಭಯೋತ್ಪಾದನಾ ಜಾಲಗಳ ಕುರಿತು ಸಿಆರ್ಎಸ್ ವರದಿ
ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್ನ (CRS) ಇತ್ತೀಚಿನ ವರದಿಯು ಪಾಕಿಸ್ತಾನದಲ್ಲಿ ಹಲವಾರು ಉಗ್ರಗಾಮಿ ಗುಂಪುಗಳು ಸಕ್ರಿಯವಾಗಿರುವುದನ್ನು ದೃಢಪಡಿಸಿದೆ. ಸತತ ಮಿಲಿಟರಿ ಕಾರ್ಯಾಚರಣೆಗಳ ಹೊರತಾಗಿಯೂ, ಅಮೆರಿಕ ಮತ್ತು ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಸಂಘಟನೆಗಳೆಂದು ಗುರುತಿಸಲ್ಪಟ್ಟ ಜಾಲಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ. ಪಾಕಿಸ್ತಾನವು ಇಂದಿಗೂ ಇಂತಹ ಸಶಸ್ತ್ರ ಗುಂಪುಗಳ ಪ್ರಮುಖ ಕೇಂದ್ರವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈ ಉಗ್ರಗಾಮಿ ಗುಂಪುಗಳನ್ನು ಜಾಗತಿಕ, ಅಫ್ಘಾನಿಸ್ತಾನ-ಕೇಂದ್ರಿತ, ಭಾರತ-ಕಾಶ್ಮೀರ ಆಧಾರಿತ, ದೇಶೀಯ ಮತ್ತು ಪಂಥೀಯ ಎಂದು ಐದು ವಿಧಗ
Mar 291 min read


ಡಾಲರ್ ಎದುರು ರೂಪಾಯಿ ಭಾರೀ ಕುಸಿತ: 94.15 ತಲುಪಿ ಐತಿಹಾಸಿಕ ಕನಿಷ್ಠ!
ಭಾರತೀಯ ಕರೆನ್ಸಿ ಮಾರುಕಟ್ಟೆಯಲ್ಲಿ ಶುಕ್ರವಾರ ಮಹತ್ವದ ಕುಸಿತ ದಾಖಲಾಗಿದ್ದು, ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ₹94.1575 ರಷ್ಟು ಕುಸಿದು ಹೊಸ ಐತಿಹಾಸಿಕ ಕನಿಷ್ಠ ಮಟ್ಟ ತಲುಪಿದೆ. ಈ ಬೆಳವಣಿಗೆ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಆತಂಕ ಮೂಡಿಸಿದೆ. ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡ ಯುದ್ಧ ಪರಿಸ್ಥಿತಿ ಜಾಗತಿಕ ಮಾರುಕಟ್ಟೆಗಳಲ್ಲಿ ಅಸ್ಥಿರತೆ ಉಂಟುಮಾಡಿದ್ದು, ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳಾದ ಡಾಲರ್ ಕಡೆ ಮುಖ ಮಾಡಿದ್ದಾರೆ. ಇದರ ಪರಿಣಾಮವಾಗಿ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಯುದ್ಧ ಆರಂಭವಾದ ನಂತರ ರೂಪಾಯಿ ಸುಮಾರು 3.5% ರಷ್ಟು ದುರ್ಬಲಗೊಂಡಿದೆ. ಇದೇ ವೇಳೆ, ಅಂತರಾಷ್ಟ್ರೀಯ ಮ
Mar 271 min read


ಹೋರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ: ಅನುಮತಿ ಇಲ್ಲದೆ ಸಾಗಿದ ತೈಲ ಹಡಗು ಮೇಲೆ ದಾಳಿ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ ಹೋರ್ಮುಝ್ ಜಲಸಂಧಿಯಲ್ಲಿ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಅನುಮತಿ ಇಲ್ಲದೆ ಜಲಸಂಧಿ ಮೂಲಕ ಸಾಗಲು ಯತ್ನಿಸಿದ ತೈಲ ಹಡಗು ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ. ಮಾಹಿತಿಯ ಪ್ರಕಾರ, ಇರಾನ್ ತನ್ನ ಸಮುದ್ರ ಗಡಿ ನಿಯಂತ್ರಣವನ್ನು ಕಠಿಣಗೊಳಿಸಿದ್ದು, ಅನುಮತಿ ಇಲ್ಲದೆ ಪ್ರವೇಶಿಸುವ ಹಡಗುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಹಡಗುಗಳು ಪರಿಶೀಲನೆಗೆ ಒಳಗಾಗಿದ್ದು, ಕೆಲವು ಹಡಗುಗಳು ದಾಳಿಗೂ ಗುರಿಯಾಗಿವೆ ಎನ್ನಲಾಗಿದೆ. ಹೋರ್ಮುಝ್ ಜಲಸಂಧಿ ವಿಶ್ವದ ಪ್ರಮುಖ ತೈಲ ಸಾಗಾಟ ಮಾರ್ಗವಾ
Mar 271 min read


ಭಾರತಕ್ಕೆ ಬಿಗ್ ರಿಲೀಫ್: ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಿದ ಇರಾನ್
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ, ಭಾರತಕ್ಕೆ ಶುಭಸುದ್ದಿಯೊಂದು ಲಭಿಸಿದೆ. ಆಯಕಟ್ಟಿನ ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಇರಾನ್ ಘೋಷಿಸಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಫ್ಟಿ ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ಭಾರತದ ಜೊತೆಗೆ ರಷ್ಯಾ, ಚೀನಾ, ಇರಾನ್ ಮತ್ತು ಪಾಕಿಸ್ತಾನದ ಹಡಗುಗಳಿಗೂ ಮುಕ್ತ ಅವಕಾಶ ನೀಡಲಾಗಿದೆ. ಅಮೆರಿಕ ಮತ್ತು ಇಸ್ರೇಲ್ ವಿರೋಧಿ ನಿಲುವಿನ ನಡುವೆ ಇರಾನ್ ಈ ಐದು ಮಿತ್ರ ರಾಷ್ಟ್ರಗಳಿಗೆ ಮಾತ್ರ ವಿಶೇಷ ರಿಯಾಯಿತಿ ನೀಡಿದೆ. ಈ
Mar 261 min read


ಫಿಲಿಪೈನ್ಸ್ನಲ್ಲಿ ಇಂಧನ ತುರ್ತು ಪರಿಸ್ಥಿತಿ ಘೋಷಣೆ
ಜಾಗತಿಕ ಯುದ್ಧ ಭೀತಿ ಮತ್ತು ಮಧ್ಯಪ್ರಾಚ್ಯದ ಉದ್ವಿಗ್ನತೆ ನಡುವೆಯೇ Philippines ದೇಶವು ಇಂಧನ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಇಂತಹ ನಿರ್ಧಾರ ಕೈಗೊಂಡಿರುವುದು ವಿಶ್ವದಲ್ಲೇ ಮೊದಲ ಉದಾಹರಣೆಯಾಗಿ ಪರಿಣಮಿಸಿದೆ. Ad ದೇಶದ ಅಧ್ಯಕ್ಷರಾದ Ferdinand Marcos Jr. ಅವರು ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ್ದು, ಇಂಧನ ಭದ್ರತೆ ಖಚಿತಪಡಿಸಿಕೊಳ್ಳುವುದು ಮತ್ತು ಹೆಚ್ಚುತ್ತಿರುವ ವಿದ್ಯುತ್ ದರಗಳಿಂದ ಸಾರ್ವಜನಿಕರನ್ನು ರಕ್ಷಿಸುವುದು ಈ ಕ್ರಮದ ಪ್ರಮುಖ ಉದ್ದೇಶ ಎಂದು ತಿಳಿಸಿದ್ದಾರೆ. ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ಭವಿಸಿರುವ ಯುದ್ಧದ ಪರಿಣಾಮವಾಗಿ ಕಚ್ಚಾ ತೈಲ ಸರಬರಾಜಿನಲ್ಲಿ ಅಸ್ಥಿರತ
Mar 251 min read


ಕೊಲಂಬಿಯಾ ವಿಮಾನ ದುರಂತ: ಸಾವಿನ ಸಂಖ್ಯೆ 66ಕ್ಕೆ ಏರಿಕೆ
ದಕ್ಷಿಣ ಕೊಲಂಬಿಯಾದ ಪುಟುಮಾಯೋ ಪ್ರಾಂತ್ಯದಲ್ಲಿ 121 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಅಮೆರಿಕ ನಿರ್ಮಿತ ಹೆರ್ಕ್ಯುಲಿಸ್ ಸಿ-130 ಸೇನಾ ವಿಮಾನ ಪತನಗೊಂಡಿದೆ. ಟೇಕ್ಆಫ್ ಆದ ಕೇವಲ 1.5 ಕಿಲೋಮೀಟರ್ ದೂರದಲ್ಲೇ ಈ ಅವಘಡ ಸಂಭವಿಸಿದ್ದು, ಮೃತಪಟ್ಟವರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ ಎಂದು ರಕ್ಷಣಾ ಸಚಿವ ಪೆಟ್ರೋ ಸಾಂಚೆಝ್ ದೃಢಪಡಿಸಿದ್ದಾರೆ. ಅಮೆಜಾನ್ ಪ್ರದೇಶದ ಪ್ಯೂರ್ಟೋ ಲೆಗುಇಜಾಮೋದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಸ್ಫೋಟಕಗಳು ಬೆಂಕಿಯಿಂದ ಸ್ಫೋಟಗೊಂಡಿವೆ. ಈ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ರಾಜಧಾನಿ ಬೋಗೋಟಾ ಮ
Mar 241 min read


ಕತಾರ್ ಅನಿಲ ತಾಣದ ಮೇಲೆ ದಾಳಿ: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ
ಕತಾರ್ನ ಲಾಸ್ ರಫನ್ LNG ತಾಣದ ಮೇಲೆ ಇರಾನ್ ನಡೆಸಿದ ದಾಳಿಯು ಜಾಗತಿಕ ಅನಿಲ ಮಾರುಕಟ್ಟೆಯಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ವಿಶ್ವದ ಒಟ್ಟು LNG ಪೂರೈಕೆಯಲ್ಲಿ ಶೇ. 25ರಷ್ಟು ಪಾಲು ಹೊಂದಿರುವ ಈ ಕೇಂದ್ರದ ಮೇಲಿನ ಅಡಚಣೆಯಿಂದಾಗಿ ಅನಿಲ ಕೊರತೆ ಮತ್ತು ಸರಬರಾಜು ವಿಳಂಬವಾಗಲಿದೆ. ಇದರಿಂದ ಅನಿಲ ಬೆಲೆಗಳು ಗಣನೀಯವಾಗಿ ಏರಿಕೆಯಾಗಲಿದ್ದು, ವಿಶೇಷವಾಗಿ ನಾರ್ಡ್ ಸ್ಟ್ರೀಮ್ ಪೈಪ್ಲೈನ್ ನಾಶದ ನಂತರ LNG ಮೇಲೆ ಹೆಚ್ಚು ಅವಲಂಬಿತವಾಗಿರುವ ಜರ್ಮನಿ ಸೇರಿದಂತೆ ಯುರೋಪಿಯನ್ ರಾಷ್ಟ್ರಗಳಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಬಿಕ್ಕಟ್ಟಿನಿಂದಾಗಿ ಭಾರತ, ಜಪಾನ್ ಮತ್ತು ತುರ್ಕಿಯೆ
Mar 191 min read


ಇಂದೋರ್: ಇವಿ ಕಾರ್ ಸ್ಫೋಟಕ್ಕೆ ಹೊತ್ತಿ ಉರಿದ ಮನೆ, ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ
ಇಂದೋರ್ನ ಬಂಗಾಳಿ ಚೌಕದ ವಸತಿ ಕಟ್ಟಡವೊಂದರಲ್ಲಿ ಬುಧವಾರ ಮುಂಜಾನೆ ಭೀಕರ ದುರಂತ ಸಂಭವಿಸಿದೆ. ಮನೆಯ ಮುಂದೆ ಚಾರ್ಜಿಂಗ್ಗೆ ಇಟ್ಟಿದ್ದ ಇಲೆಕ್ಟ್ರಿಕ್ (ಇವಿ) ಕಾರು ಆಕಸ್ಮಿಕವಾಗಿ ಸ್ಫೋಟಗೊಂಡ ಪರಿಣಾಮ ಇಡೀ ಮನೆಗೆ ಬೆಂಕಿ ವ್ಯಾಪಿಸಿದೆ. ಈ ಅವಘಡದಲ್ಲಿ ಬಾಲಕಿ ಸೇರಿದಂತೆ ಒಂದೇ ಕುಟುಂಬದ ಏಳು ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ವಿಜಯ್ ಸೇಥಿಯಾ, ಸುಮನ್ ಮತ್ತು ರಾಶಿ ಸೇರಿದಂತೆ ಏಳು ಜನ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಸೌರಭ್ ಮತ್ತು ಆಶಿಶ್ ಸೇರಿದಂತೆ ಮೂವರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಗ್ನಿಶಾಮಕ ದಳವು ಸ್ಥಳಕ್ಕ
Mar 191 min read


ಪಾಕಿಸ್ತಾನದ ಗಣರಾಜ್ಯೋತ್ಸವ ಆಚರಣೆ ರದ್ದು
ವಿಶ್ವದಾದ್ಯಂತ ಉಂಟಾಗಿರುವ ಇಂಧನ ಮತ್ತು ಅನಿಲ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನ, ಈ ಬಾರಿ ಮಾರ್ಚ್ 23ರಂದು ನಡೆಯಬೇಕಿದ್ದ ತನ್ನ 'ಗಣರಾಜ್ಯೋತ್ಸವ' ಆಚರಣೆಯನ್ನು ರದ್ದುಗೊಳಿಸಿದೆ. ತೀವ್ರ ಹಣಕಾಸಿನ ಮುಗ್ಗಟ್ಟು ಮತ್ತು ಇಂಧನ ಕೊರತೆಯಿಂದಾಗಿ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದ್ದು, ಸರ್ಕಾರದ ಈ ನಿರ್ಧಾರ ನೆರೆಹೊರೆಯ ರಾಷ್ಟ್ರಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ದೊಡ್ಡ ಮಟ್ಟದ ಕಾರ್ಯಕ್ರಮಗಳ ಬದಲಿಗೆ ಸರಳವಾಗಿ ಆಚರಿಸುವಂತೆ ಸರ್ಕಾರ ಜನರಿಗೆ ಸೂಚಿಸಿದೆ. "ಆಹಾರ ಮತ್ತು ಪಾನೀಯಗಳನ್ನು ಸೇವಿಸಿ ಅದ್ಧೂರಿಯಾಗಿ ಸಂಭ್ರಮಿಸಬೇಡಿ, ಕೇವಲ ಕೇಕ್ ಕತ್ತರಿಸಿ ಮನೆಗೆ ತೆರಳಿ" ಎಂದು ಜನರಲ್ಲಿ ವಿನಂ
Mar 191 min read


ಕಾಬೂಲ್ ಆಸ್ಪತ್ರೆ ಮೇಲೆ ಪಾಕ್ ವಾಯುಪಡೆ ಭೀಕರ ದಾಳಿ: 400 ಮಂದಿ ಸಾವು?
ಅಫ್ಘಾನಿಸ್ತಾನದ ಕಾಬೂಲ್ನಲ್ಲಿರುವ ಪುನರ್ವಸತಿ ಆಸ್ಪತ್ರೆಯ ಮೇಲೆ ಪಾಕಿಸ್ತಾನ ವಾಯುಪಡೆ ದಾಳಿ ನಡೆಸಿದೆ. ನೂರಾರು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆಸ್ಪತ್ರೆಯ ಬಹುಭಾಗ ಭಸ್ಮಗೊಂಡಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಪಾಕಿಸ್ತಾನ ವಾಯುಪಡೆ ತನ್ನ ಜೆಎಫ್-17 ಮತ್ತು ಎಫ್-16 ಯುದ್ಧ ವಿಮಾನಗಳನ್ನು ಬಳಸಿ ಕಾಬೂಲ್ನ ಐದು ಸ್ಥಳಗಳ ಮೇಲೆ ದಾಳಿ ಮಾಡಿದೆ. ಅಫ್ಘಾನಿಸ್ತಾನದ ಆರೋಪಗಳನ್ನು ಪಾಕಿಸ್ತಾನ ತಳ್ಳಿ ಹಾಕಿದೆ. ಈ ಬಗ್ಗೆ ಯಾವುದೇ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹೇಳಿಕೊಂಡಿದೆ.
Mar 171 min read


ಹಾರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ದಾಳಿ: ಭಾರತ ತೀವ್ರ ಖಂಡನೆ
ನವದೆಹಲಿ: ವಿಶ್ವದ ಅತ್ಯಂತ ನಿರ್ಣಾಯಕ ಸಮುದ್ರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯಲ್ಲಿ ಥೈಲ್ಯಾಂಡ್ನ ‘ಮಯೂರಿ ನಾರಿ’ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಬುಧವಾರ ಬಲವಾಗಿ ಖಂಡಿಸಿದೆ. ಈ ಹಡಗು ಗುಜರಾತ್ನ ಕಾಂಡ್ಲಾ ಬಂದರಿಗೆ ಪ್ರಯಾಣಿಸುತ್ತಿದ್ದ ವೇಳೆ ಮಾರ್ಚ್ 11 ರಂದು ಈ ಅನಿರೀಕ್ಷಿತ ದಾಳಿ ನಡೆದಿದೆ. ಈ ಘಟನೆಯನ್ನು 'ಪ್ರಚೋದನಕಾರಿಯಲ್ಲದ ದಾಳಿ' ಎಂದು ಬಣ್ಣಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತೀವ್ರ ಕಳವಳ ವ್ಯಕ್ತಪಡಿಸಿದೆ. ದಾಳಿಗಳ ತೀವ್ರತೆ ಮತ್ತು ಮಾರಣಾಂತಿಕತೆ ದಿನೇ ದಿನೇ ಹೆಚ್ಚುತ್ತಿರುವುದಕ್ಕೆ ಸಚಿವಾಲಯವು ಆತಂಕ ವ್ಯಕ್ತಪಡಿಸಿದೆ. ಈ ಹಿಂದಿನ ಸಂಘರ್ಷಗಳ
Mar 131 min read
Archive
bottom of page



