top of page
News Articles
Sathyapatha News Plus


ಏಳು ವರ್ಷಗಳ ಬಳಿಕ ಇರಾನ್ನಿಂದ ಭಾರತಕ್ಕೆ ತೈಲ ಆಮದು
ಏಳು ವರ್ಷಗಳ ಸುದೀರ್ಘ ಬಿಡುವಿನ ನಂತರ ಭಾರತವು ಇರಾನ್ನಿಂದ ಮತ್ತೆ ಕಚ್ಚಾತೈಲ ಖರೀದಿಸಲು ಮುಂದಾಗಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿಯ ಮೂಲಕ ಸರಕು ಸಾಗಣೆಯಲ್ಲಿ ಉಂಟಾಗಿರುವ ವ್ಯತ್ಯಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 2019ರ ಮೇ ನಂತರ ಟೆಹರಾನ್ನಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದು ಇದೇ ಮೊದಲು ಎಂದು ತೈಲ ಸಚಿವಾಲಯ ತಿಳಿಸಿದೆ. ವಿಶ್ವದ ಮೂರನೇ ಅತಿದೊಡ್ಡ ತೈಲ ಬಳಕೆದಾರ ರಾಷ್ಟ್ರವಾಗಿರುವ ಭಾರತವು ಪ್ರಸ್ತುತ 40ಕ್ಕೂ ಹೆಚ್ಚು ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ಸಂಘರ್ಷದ ಸಂದರ್ಭದಲ್ಲಿ ಇಂಧನ ಭದ್ರತೆಯನ್ನು
Apr 51 min read


ಜಿಮ್ ಟ್ರೈನರ್ ಸಮೀರ್ ಅಸಲಿ ರೂಪ ಬಯಲು: ಯುವತಿಗೆ ಎಂಟು ಬಾರಿ ಗರ್ಭಪಾತದ ಮಾತ್ರೆ ನೀಡಿದ ಕಿರಾತಕ
ಹುಬ್ಬಳ್ಳಿಯಲ್ಲಿ ಜಿಮ್ ಟ್ರೈನರ್ ಸಮೀರ್ ಎಂಬಾತನ ಲವ್ ಜಿಹಾದ್ ಕೃತ್ಯಗಳು ಬಯಲಾಗುತ್ತಿವೆ. ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಲವಂತವಾಗಿ 8 ರಿಂದ 10 ಬಾರಿ ಗರ್ಭಪಾತದ ಮಾತ್ರೆಗಳನ್ನು ನೀಡಿದ್ದ ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಆರೋಪಿಯ ಮೊಬೈಲ್ ಪರಿಶೀಲಿಸಿದಾಗ ಯುವತಿ ಮಾತ್ರೆ ಸೇವಿಸುತ್ತಿರುವ ವಿಡಿಯೋಗಳು ಮತ್ತು ಇತರ ಯುವತಿಯರೊಂದಿಗೆ ನಡೆಸಿದ ಚಾಟ್ಗಳು ಪತ್ತೆಯಾಗಿವೆ. ಸಂತ್ರಸ್ತೆಯ ದೂರಿನಂತೆ ವಿದ್ಯಾನಗರ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಜಿಮ್ಗೆ ಬರುತ್ತಿದ್ದ ಹಿಂದೂ ಯುವತಿಯರನ್ನೇ ಗುರಿಯಾಗಿಸಿ ಸಮೀರ್ ವಂಚಿಸುತ್ತಿದ್ದ ಎಂಬ ಆರೋಪ ಕೇಳಿಬಂ
Apr 51 min read


ಜನರ ಸಂಕಷ್ಟ ಮರೆತ ಜನಪ್ರತಿನಿಧಿಗಳು: ಎಲ್ಪಿಜಿಗಾಗಿ ಜನ ಕ್ಯೂ ನಿಂತರೆ, ಐಪಿಎಲ್ ಟಿಕೆಟ್ಗಾಗಿ ಪಿಎಗಳನ್ನು ಸಾಲಿನಲ್ಲಿ ನಿಲ್ಲಿಸಿದ ಶಾಸಕರು!
ರಾಜ್ಯದಲ್ಲಿ ಎಲ್ಪಿಜಿ ಗ್ಯಾಸ್ಗಾಗಿ ಜನ ಸಾಮಾನ್ಯರು ರಾತ್ರಿ ಇಡೀ ಕ್ಯೂ ನಿಂತು ಪರದಾಡುತ್ತಿದ್ದರೆ, ಇತ್ತ ಜನಪ್ರತಿನಿಧಿಗಳು ಐಪಿಎಲ್ ಕ್ರಿಕೆಟ್ ಪಂದ್ಯದ ಮೋಜಿನಲ್ಲಿ ಮಿಂದೇಳುತ್ತಿದ್ದಾರೆ. ನಾಳೆ ನಡೆಯಲಿರುವ ಬೆಂಗಳೂರು ಮತ್ತು ಚೆನ್ನೈ ನಡುವಿನ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಪಡೆಯಲು ಶಾಸಕರು ತಮ್ಮ ಆಪ್ತ ಸಹಾಯಕರನ್ನು (ಪಿಎ) ವಿಧಾನಸೌಧದಲ್ಲಿ ಕ್ಯೂ ನಿಲ್ಲಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಮತ್ತು ಕೆಎಸ್ಸಿಎ ನಡುವಿನ ಒಪ್ಪಂದದಂತೆ ಪ್ರತಿ ಶಾಸಕರಿಗೆ ಮೂರು ಉಚಿತ ಟಿಕೆಟ್ ನೀಡಲಾಗುತ್ತಿದ್ದು, ಇದನ್ನು ಪಡೆಯಲು ಸ್ಪೀಕರ್ ಕಚೇರಿ ಮುಂದೆ ಪಿಎಗಳ ದಂಡೇ ನೆರೆದಿತ್ತು.
Apr 41 min read


ಕುಕ್ಕೆ ಸುಬ್ರಹ್ಮಣ್ಯಕ್ಕೆ ಹರಿದುಬಂದ ಭಕ್ತ ಸಾಗರ: ರಜೆ ಹಿನ್ನೆಲೆ ವಿವಿಧ ಸೇವೆಗಳಿಗಾಗಿ ಭಕ್ತರ ದಂಡು
ಸರ್ಕಾರಿ ರಜೆಯ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭಕ್ತರ ಸಾಗರವೇ ಹರಿದುಬಂದಿದೆ. ಹೊರರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಸೇವೆಗಳನ್ನು ನೆರವೇರಿಸಿ ಪುನೀತರಾದರು. ಭಕ್ತರ ದಟ್ಟಣೆಯಿಂದಾಗಿ ನಾಗಪ್ರತಿಷ್ಠಾ ಮಂಟಪ ಹಾಗೂ ಹೊರಾಂಗಣದಲ್ಲಿ ಜನವೋ ಜನ ತುಂಬಿದ್ದರು. ಭಕ್ತರ ಅನುಕೂಲಕ್ಕಾಗಿ ದೇವಳದ ಮಂಡಳಿ ಮತ್ತು ಪೊಲೀಸ್ ಇಲಾಖೆ ವಾಹನ ಪಾರ್ಕಿಂಗ್ ಹಾಗೂ ದರ್ಶನಕ್ಕೆ ಬಿಗಿ ವ್ಯವಸ್ಥೆ ಮಾಡಿತ್ತು. ಮುಂದಿನ ದಿನಗಳಲ್ಲೂ ಸತತ ರಜೆ ಇರುವುದರಿಂದ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಸೂಕ್ತ
Apr 41 min read


ಚಂದ್ರಯಾನದ ಹೊಸ ಯುಗ: 50 ವರ್ಷಗಳ ನಂತರ ಮತ್ತೆ ಚಂದ್ರನತ್ತ ಮಾನವ; 'ಆರ್ಟಿಮಿಸ್' ಮಿಷನ್ ಯಶಸ್ವಿ ಉಡಾವಣೆ
ಐವತ್ತು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಮಾನವನು ಮತ್ತೆ ಚಂದ್ರನತ್ತ ಪ್ರಯಾಣ ಬೆಳೆಸುವ ಐತಿಹಾಸಿಕ 'ಆರ್ಟಿಮಿಸ್' ಮಿಷನ್ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ. ನಾಲ್ವರು ಗಗನಯಾನಿಗಳನ್ನು ಹೊತ್ತ ಓರಿಯನ್ ಕ್ಯಾಪ್ಸ್ಯೂಲ್ ಮತ್ತು ಎಸ್ಎಲ್ಎಸ್ ರಾಕೆಟ್ ಭಾರತೀಯ ಕಾಲಮಾನ ಮುಂಜಾನೆ 4.05ಕ್ಕೆ ನಭಕ್ಕೆ ಚಿಮ್ಮಿತು. ಈ ತಂಡದಲ್ಲಿ ಮೊದಲ ಬಾರಿಗೆ ಮಹಿಳೆ ಹಾಗೂ ಕಪ್ಪುವರ್ಣೀಯ ಗಗನಯಾನಿ ಸ್ಥಾನ ಪಡೆದಿರುವುದು ವಿಶೇಷ. ಈ 10 ದಿನಗಳ ಸಾಹಸಮಯ ಪ್ರಯಾಣವು ಚಂದ್ರನ ಅಂಗಳದಲ್ಲಿ ಮಾನವನ ಭವಿಷ್ಯದ ವಸಾಹತು ಮತ್ತು ಸಂಶೋಧನೆಗಳಿಗೆ ಭದ್ರ ಬುನಾದಿ ಹಾಕಲಿದೆ. ಉಡಾವಣೆಯ ನಂ
Apr 41 min read


ನಾಸಿಕ್ನಲ್ಲಿ ಭೀಕರ ಅಪಘಾತ: ಬಾವಿಗೆ ಉರುಳಿದ ಕಾರು; ಒಂದೇ ಕುಟುಂಬದ 6 ಮಕ್ಕಳು ಸೇರಿ 9 ಮಂದಿ ಸಾವು
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಪರಿಣಾಮ ಒಂದೇ ಕುಟುಂಬದ 9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಆರು ಮುಗ್ಧ ಮಕ್ಕಳು ಸೇರಿರುವುದು ದುರಂತದ ತೀವ್ರತೆಯನ್ನು ಹೆಚ್ಚಿಸಿದೆ. ಇಂದೋರ್ ಗ್ರಾಮದ ದರ್ಗುಡೆ ಕುಟುಂಬದವರು ಖಾಸಗಿ ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ಎನ್ಡಿಆರ್ಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸುದೀರ್ಘ ರಕ್ಷಣಾ ಕಾರ್ಯಾಚರಣೆ ನಡೆಸಿದರು. ನೀರು ತುಂಬಿದ್ದ
Apr 41 min read


ಎಲ್ಪಿಜಿ ಬೆನ್ನಲ್ಲೇ ಡಾಂಬರು ಕೊರತೆ, ರಸ್ತೆ ಕಾಮಗಾರಿಗಳಿಗೆ ಬ್ರೇಕ್
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡ ಹಾರ್ಮುಜ್ ಜಲಸಂಧಿಯ ಮೇಲೆ ಪರಿಣಾಮ ಬೀರಿದ್ದು, ದೇಶದಲ್ಲಿ ಎಲ್ಪಿಜಿ ಬೆನ್ನಲ್ಲೇ ಈಗ ಡಾಂಬರು (ಬಿಟುಮಿನ್) ಅಭಾವ ತಲೆದೋರಿದೆ. ಕಚ್ಚಾ ವಸ್ತುಗಳ ಪೂರೈಕೆ ಸ್ಥಗಿತಗೊಂಡಿರುವುದರಿಂದ ರಸ್ತೆ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಲ್ಲುವ ಭೀತಿ ಎದುರಾಗಿದೆ. ಕೇವಲ ಪೂರೈಕೆ ವ್ಯತ್ಯಯ ಮಾತ್ರವಲ್ಲದೆ, ಡಾಂಬರು ದರವು ಪ್ರತಿ ಟನ್ಗೆ 65 ಸಾವಿರ ರೂಪಾಯಿ ಗಡಿ ದಾಟಿದೆ. ಗುತ್ತಿಗೆದಾರರು ಹೆಚ್ಚಿನ ಹಣ ನೀಡಲು ಮುಂದಾಗಿದ್ದರೂ ಮಾರುಕಟ್ಟೆಯಲ್ಲಿ ಸ್ಟಾಕ್ ಲಭ್ಯವಿಲ್ಲದಂತಾಗಿದೆ. ಇದರಿಂದಾಗಿ ರಾಜ್ಯದಾದ್ಯಂತ ಹಲವು ಪ್ರಮುಖ ರಸ್ತೆ ಅಭಿವೃದ್ಧಿ ಯೋಜನೆಗಳು ಕುಂ
Apr 41 min read


ಯುದ್ಧದ ಬಿಸಿ: ಪುತ್ತೂರು ಬೈಪಾಸ್ನಲ್ಲಿ ಇಂಧನಕ್ಕಾಗಿ ಆಟೋ ರಿಕ್ಷಾಗಳ ಕಿಲೋಮೀಟರ್ ಉದ್ದದ ಸಾಲು
ಯುದ್ಧದ ಜಾಗತಿಕ ಪರಿಣಾಮದಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಪುತ್ತೂರು ಬೈಪಾಸ್ ರಸ್ತೆಯಲ್ಲಿ ಆಟೋ ರಿಕ್ಷಾಗಳು ಸಾಲಾಗಿ ನಿಂತಿವೆ. ಬೆಳಿಗ್ಗೆಯಿಂದಲೇ ರಿಕ್ಷಾಗಳು ಸರತಿ ಸಾಲಿನಲ್ಲಿ ನಿಂತಿರುವುದರಿಂದ ಸಂಚಾರ ದಟ್ಟಣೆ ಉಂಟಾಗಿದೆ. ಯುದ್ಧದ ಬಿಸಿ ಸ್ಥಳೀಯ ಸಾರಿಗೆಯ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಸಾಮಾನ್ಯ ಜನರ ದೈನಂದಿನ ಬದುಕು ಅಸ್ತವ್ಯಸ್ತಗೊಂಡಿದೆ.
Apr 31 min read


ಇರಾನ್ ಪ್ರತೀಕಾರದ ಎಚ್ಚರಿಕೆ: ಮಧ್ಯಪ್ರಾಚ್ಯದ 8 ಪ್ರಮುಖ ಸೇತುವೆಗಳ ಮೇಲೆ ದಾಳಿಗೆ ಸಂಚು; ರಹಸ್ಯ ಪಟ್ಟಿ ಬಿಡುಗಡೆ
ಅಮೆರಿಕ ತನ್ನ ಪ್ರಮುಖ ಬಿ1 ಸೇತುವೆಯನ್ನು ಧ್ವಂಸಗೊಳಿಸಿದ್ದಕ್ಕೆ ಪ್ರತಿಯಾಗಿ ಇರಾನ್ ಈಗ ಭೀಕರ ಪ್ರತೀಕಾರದ ಎಚ್ಚರಿಕೆ ನೀಡಿದೆ. ಅರಬ್ ರಾಷ್ಟ್ರಗಳಲ್ಲಿರುವ ಎಂಟು ಆಯಕಟ್ಟಿನ ಬೃಹತ್ ಸೇತುವೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಇರಾನ್ ಸಜ್ಜಾಗಿದ್ದು, ಈ ಸಂಬಂಧಿತ ರಹಸ್ಯ ಹಿಟ್ ಲಿಸ್ಟ್ ಬಿಡುಗಡೆ ಮಾಡಿದೆ. ಕುವೈತ್, ಯುಎಇ, ಸೌದಿ ಅರೇಬಿಯಾ ಮತ್ತು ಜೋರ್ಡಾನ್ನಲ್ಲಿರುವ ಪ್ರಮುಖ ಸಂಪರ್ಕ ಸೇತುವೆಗಳ ಮೇಲೆ ದಾಳಿ ನಡೆಸುವ ಇರಾನ್ ಬೆದರಿಕೆಯಿಂದಾಗಿ ಇಡೀ ಮಧ್ಯಪ್ರಾಚ್ಯದಲ್ಲಿ ಯುದ್ಧದ ಆತಂಕ ಹೆಚ್ಚಿದೆ. ಅಮೆರಿಕದ ದಾಳಿಗೆ ತಕ್ಕ ಉತ್ತರ ನೀಡಲು ಇರಾನ್ ಈ ಮಾರಕ ಸಂಚು ರೂಪಿಸಿದೆ.
Apr 31 min read


ಔಷಧ ವಲಯದಲ್ಲಿ ಟ್ರಂಪ್ ಸಂಚಲನ: ಬ್ರಾಂಡೆಡ್ ಔಷಧಿಗಳ ಮೇಲೆ 100% ಆಮದು ಸುಂಕ ವಿಧಿಸಲು ಆದೇಶ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ರಾಂಡೆಡ್ ಔಷಧಗಳ ಮೇಲೆ ಶೇ. 100ರಷ್ಟು ಭಾರಿ ಸುಂಕ ವಿಧಿಸುವ ಮಹತ್ವದ ಕಾರ್ಯಾದೇಶಕ್ಕೆ ಸಹಿ ಹಾಕಿದ್ದಾರೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪೇಟೆಂಟ್ ಹೊಂದಿರುವ ಔಷಧಗಳ ಮೇಲೆ ಈ ಸುಂಕ ಅನ್ವಯವಾಗಲಿದ್ದು, ಪ್ರಮುಖವಾಗಿ ಚೀನಾದಂತಹ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಈ ಕಟ್ಟುನಿಟ್ಟಿನ ಕ್ರಮದ ಮೂಲಕ ಔಷಧ ತಯಾರಿಕಾ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಅಮೆರಿಕಕ್ಕೆ ಸ್ಥಳಾಂತರಿಸುವಂತೆ ಒತ್ತಡ ಹೇರಲಾಗುತ್ತಿದೆ. ಇದರಿಂದ ದೇಶದೊಳಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮತ್ತು ಸ್ಥಳೀಯವಾಗಿ ಔಷಧ ಉತ್ಪಾದನೆಗೆ ಹೆಚ್ಚಿನ
Apr 31 min read


ಇರಾನ್-ಇಸ್ರೇಲ್ ಯುದ್ಧ: ಅಮೆರಿಕದ ಬೆಂಬಲದೊಂದಿಗೆ ಮುಂದುವರೆದ ಕ್ಷಿಪಣಿ ದಾಳಿ; ತೈಲ ರಾಜತಾಂತ್ರಿಕತೆ ಪ್ರದರ್ಶಿಸಿದ ಟ್ರಂಪ್
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಕರಾಜ್ನ ಬಿ1 ಸೇತುವೆಯ ಧ್ವಂಸವು ಯುದ್ಧದ ಭೀಕರತೆಯನ್ನು ಎತ್ತಿ ತೋರಿಸಿದೆ. ಕ್ಷಿಪಣಿ ದಾಳಿಯಿಂದಾಗಿ ಇಡೀ ಪ್ರಾಂತ್ಯ ಕತ್ತಲಲ್ಲಿ ಮುಳುಗಿದ್ದು, ಸ್ಥಳೀಯರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮತ್ತೊಂದೆಡೆ, ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಸಂಚಲನ ಮೂಡಿಸಿದೆ. ಹಾರ್ಮುಜ್ ಜಲಸಂಧಿಯ ಹಂಗು ತಮಗಿಲ್ಲ ಎಂದು ಸಾರುವ ಮೂಲಕ, ಅವರು ಅಮೆರಿಕದ ತೈಲ ಸ್ವಾವಲಂಬನೆಯನ್ನು ಅಸ್ತ್ರವಾಗಿ ಬಳಸಿ ಇತರ ರಾಷ್ಟ್ರಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
Apr 31 min read


ಡಾಲರ್ ಎದುರು ರೂಪಾಯಿ ಭರ್ಜರಿ ಚೇತರಿಕೆ: 12 ವರ್ಷಗಳಲ್ಲೇ ದಾಖಲೆಯ ಏರಿಕೆ!
ಭಾರತೀಯ ರೂಪಾಯಿ ಅಮೆರಿಕನ್ ಡಾಲರ್ ಎದುರು ಕಳೆದ 12 ವರ್ಷಗಳಲ್ಲೇ ಒಂದೇ ದಿನದಲ್ಲಿ ಅತಿದೊಡ್ಡ ಏರಿಕೆಯನ್ನು ದಾಖಲಿಸುವ ಮೂಲಕ ಗಮನಸೆಳೆದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೂಪಾಯಿ ಮೌಲ್ಯದ ಮೇಲೆ ನಡೆಯುವ ಊಹಾಪೋಹದ ವಹಿವಾಟುಗಳಿಗೆ ಕಠಿಣ ಕಡಿವಾಣ ಹಾಕಿದ ಬೆನ್ನಲ್ಲೇ ಈ ಬದಲಾವಣೆ ಕಂಡಬಂದಿದೆ. ಆರ್ಬಿಐನ ಈ ಸಮಯೋಚಿತ ಕ್ರಮದಿಂದಾಗಿ ರೂಪಾಯಿ ಮೌಲ್ಯವು ಒಂದೇ ದಿನದಲ್ಲಿ ಸುಮಾರು 1.8% ನಷ್ಟು ಭರ್ಜರಿ ಏರಿಕೆ ಕಂಡಿದೆ. ಮಾರ್ಚ್ 31ರಂದು ಪ್ರತಿ ಡಾಲರ್ಗೆ 95 ರೂಪಾಯಿ ಗಡಿ ದಾಟಿದ್ದ ಮೌಲ್ಯವು, ಇಂದು ಇಳಿಕೆ ಕಂಡು 93.14 ರೂಪಾಯಿ ಅಸುಪಾಸಿನಲ್ಲಿ ವ್ಯವಹಾರ ನಡೆಸುತ್ತಿದೆ. ವಿದೇಶಿ ಹೂಡಿಕೆದ
Apr 21 min read


ಜೈ ತುಳುನಾಡು ಬೆಂಗಳೂರು ಘಟಕಕ್ಕೆ ನೂತನ ಸಮಿತಿ ಆಯ್ಕೆ: ವಿನಯ್ ಮಣಿಯಾನಮನೆ ನೂತನ ಅಧ್ಯಕ್ಷ
ಬೆಂಗಳೂರಿನಲ್ಲಿ ನೆಲೆಸಿರುವ ತುಳುನಾಡಿನ ಜನರನ್ನು ಒಗ್ಗೂಡಿಸಿ, ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷಾ ಮಾನ್ಯತೆಗಾಗಿ ಶ್ರಮಿಸುತ್ತಿರುವ 'ಜೈ ತುಳುನಾಡು (ರಿ.)' ಬೆಂಗಳೂರು ಘಟಕದ 2026-27ನೇ ಸಾಲಿನ ವಾರ್ಷಿಕ ಮಹಾಸಭೆಯು ಮಾ. 29ರಂದು ಮೆಜೆಸ್ಟಿಕ್ ಸಮೀಪದ ಸ್ವಾಗತ್ ಹೋಟೆಲ್ನಲ್ಲಿ ಯಶಸ್ವಿಯಾಗಿ ಜರುಗಿತು. ಸಭೆಯಲ್ಲಿ ಸಂಘಟನೆಯ ಸಮಾಜಮುಖಿ ಕಾರ್ಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಈ ಮಹಾಸಭೆಯಲ್ಲಿ ಮುಂದಿನ ಸಾಲಿನ ನೂತನ ಸಮಿತಿಯನ್ನು ರಚಿಸಲಾಗಿದ್ದು, ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಲಾಯಿತು. ಸಂಘಟನೆಯ ನೂತನ ಅಧ್ಯಕ್ಷರಾಗಿ ವಿನಯ್ ಮಣಿಯಾನಮನೆ ಅವರು ಬಹುಮತದಿಂದ ಆಯ್ಕೆಯಾದರು. ವ
Apr 21 min read


ಬೆಂಗಳೂರಿನ ಪಬ್ನಲ್ಲಿ 5 ರೂಪಾಯಿಯ ‘ಬೋಟಿ’ಗೆ 150 ರೂ. ಬಿಲ್: ಯುವಕನ ಪೋಸ್ಟ್ ವೈರಲ್!
ಬೆಂಗಳೂರಿನ ಐಷಾರಾಮಿ ಪಬ್ಗಳ ದುಬಾರಿ ಬೆಲೆಯ ಬಗ್ಗೆ ಯುವಕನೋರ್ವ ಹಂಚಿಕೊಂಡ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಕೇವಲ 5 ರೂಪಾಯಿಗೆ ಸಿಗುವ ಸಾಮಾನ್ಯ 'ಬೋಟಿ'ಗೆ ಪಬ್ನಲ್ಲಿ 'ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್' ಎಂದು ಹೆಸರಿಟ್ಟು, ಬರೋಬ್ಬರಿ 150 ರೂಪಾಯಿ ವಸೂಲಿ ಮಾಡಲಾಗಿದೆ. ಈ ವಂಚನೆಯನ್ನು ಕಂಡು ಹತಾಶನಾದ ಅರುಣ್ ರಾಜ್ ಪತ್ತಾರ್ ಎಂಬ ಯುವಕ, "ಇದಕ್ಕೆ 150 ರೂ. ನೀಡಿದ ಮೊದಲ ವ್ಯಕ್ತಿ ನಾನೇ ಇರಬೇಕು" ಎಂದು ಎಕ್ಸ್ (X) ಖಾತೆಯಲ್ಲಿ ವ್ಯಂಗ್ಯವಾಡಿದ್ದಾನೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪಬ್ಗಳ ಲೂಟಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್
Apr 21 min read


ಇಂದಿನಿಂದ ದೇಶಾದ್ಯಂತ E20 ಪೆಟ್ರೋಲ್ ಕಡ್ಡಾಯ: ಹಳೆಯ ವಾಹನ ಸವಾರರು ಎಚ್ಚರ!
ದೇಶದ ಇಂಧನ ಸ್ವಾವಲಂಬನೆ ಹೆಚ್ಚಿಸಲು ಇಂದಿನಿಂದ (ಏಪ್ರಿಲ್ 1) ಎಲ್ಲಾ ಪೆಟ್ರೋಲ್ ಬಂಕ್ಗಳಲ್ಲಿ ಶೇ. 20ರಷ್ಟು ಎಥೆನಾಲ್ ಮಿಶ್ರಿತ 'E20' ಪೆಟ್ರೋಲ್ ಮಾರಾಟವನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಕಚ್ಚಾ ತೈಲ ಆಮದು ಕಡಿಮೆ ಮಾಡುವುದು ಮತ್ತು ರೈತರ ಆದಾಯ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದು ಪರಿಸರ ಮಾಲಿನ್ಯವನ್ನು ಗಣನೀಯವಾಗಿ ತಗ್ಗಿಸಲಿದ್ದು, ದೇಶದ ಆರ್ಥಿಕತೆಗೆ ಬಲ ನೀಡಲಿದೆ. ಆದರೆ, 2023ಕ್ಕಿಂತ ಮೊದಲು ತಯಾರಾದ ಹಳೆಯ ವಾಹನಗಳ ಮಾಲೀಕರಿಗೆ ಇದು ಸ್ವಲ್ಪ ಆತಂಕಕಾರಿ ವಿಷಯವಾಗಿದೆ. ಹಳೆಯ ಎಂಜಿನ್ಗಳಲ್ಲಿರುವ ರಬ್ಬರ್ ಸೀಲ್ಗಳು ಮತ್ತು ಪೈಪ್ಗಳು ಕೇವಲ ಶುದ್ಧ ಪೆಟ್ರ
Apr 21 min read


ಸಾರಿಗೆ ನೌಕರರಿಗೆ ಸಿಹಿ ಸುದ್ದಿ :ಏಪ್ರಿಲ್ 6ಕ್ಕೆ ಮಹತ್ವದ ಸಭೆ
ರಾಜ್ಯ ಬಜೆಟ್ ಘೋಷಣೆಯಂತೆ ಸಾರಿಗೆ ನೌಕರರ ವೇತನ ಹೆಚ್ಚಿಸಲು ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂಪಾಷ ನೇತೃತ್ವದಲ್ಲಿ ವೇತನ ಹೆಚ್ಚಳದ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ವಿಶೇಷ ಸಭೆ ಆಯೋಜಿಸಲಾಗಿದೆ. ಈ ನಿರ್ಧಾರವು ಸಾವಿರಾರು ಸಾರಿಗೆ ನೌಕರರಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದು, ಆರ್ಥಿಕ ಸುಧಾರಣೆಯ ನಿರೀಕ್ಷೆಯಿದೆ. ಬರುವ ಏಪ್ರಿಲ್ 6ರಂದು ನೌಕರರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಎಂಡಿ ಸಮಾಲೋಚನೆ ನಡೆಸಲಿದ್ದಾರೆ. ಅಂದೇ ವೇತನ ಪರಿಷ್ಕರಣೆಯ ಬಗ್ಗೆ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ. ಸಾರಿಗೆ ಇಲಾಖ
Apr 21 min read


ಮಸೀದಿಯಲ್ಲಿ ಹರಕೆ ಹುಂಡಿ ಕಳವು: ಸಿಸಿಟಿವಿಯಲ್ಲಿ ಆರೋಪಿ ಸೆರೆ
ಮಾರ್ಚ್ 30ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಮಸೀದಿಯೊಂದರ ಆವರಣದಲ್ಲಿ ಹರಕೆ ಹುಂಡಿಯನ್ನು ಕಳವು ಮಾಡಿರುವ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಮಸೀದಿಯೊಳಗೆ ಪ್ರವೇಶಿಸಿ, ಯಾರೂ ಇಲ್ಲದ ಸಮಯ ನೋಡಿ ಹುಂಡಿಯೊಂದಿಗೆ ಪರಾರಿಯಾಗಿದ್ದಾನೆ. ಈ ಕೃತ್ಯದಿಂದ ಮಸೀದಿಯ ಆಡಳಿತ ಮಂಡಳಿ ಹಾಗೂ ಭಕ್ತರು ಆತಂಕಕ್ಕೊಳಗಾಗಿದ್ದಾರೆ. ಕಳ್ಳತನದ ದೃಶ್ಯಗಳು ಮಸೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ಆರೋಪಿಯು ನೀಲಿ ಬಣ್ಣದ ಟಿ-ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿರುವುದು ಕಂಡುಬಂದಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಸಿಟಿವಿ ಆಧಾರದ ಮೇಲೆ ಪೊಲೀಸರು
Apr 21 min read


ಇಂದು (ಏ. 01)ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ-ಚೆನ್ನಯ್ಯ ಆದಿ ಬೈದರ್ಕಳ ನೇಮೋತ್ಸವ
ಇತಿಹಾಸ ಪ್ರಸಿದ್ಧ ಕಾರಣಿಕ ಶಕ್ತಿಗಳಾದ ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿ ಬೈದರುಗಳ ನೇಮೋತ್ಸವವು ಏಪ್ರಿಲ್ 1ರಂದು ಎಣ್ಣೂರು ಕಟ್ಟಬೀಡು ಮತ್ತು ಗರಡಿಯಲ್ಲಿ ಅತ್ಯಂತ ಸಡಗರದಿಂದ ನಡೆಯಿತು. ಆನುವಂಶಿಕ ಆಡಳಿತದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಗ ತಂಬಿಲ, ಮುಹೂರ್ತ ತೋರಣ ಮತ್ತು ಭಂಡಾರ ಏರುವಿಕೆ ಶಾಸ್ತ್ರೋಕ್ತವಾಗಿ ಜರುಗಿದವು. ಈ ಪುಣ್ಯ ಕಾರ್ಯಕ್ರಮಕ್ಕೆ ಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿ ದೈವಗಳ ದರ್ಶನ ಪಡೆದರು. ರಾತ್ರಿ ದೈವಗಳ ಗರಡಿ ಇಳಿಯುವಿಕೆ ಮತ್ತು ಕಿನ್ನಿದಾರು ದರ್ಶನ ರಂಗಸ್ಥಳದಲ್ಲಿ ಸಾರವ
Apr 11 min read


ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಸಿಹಿ ಸುದ್ದಿ: ಏಪ್ರಿಲ್ 10ರವರೆಗೆ ಬಸ್ ಪಾಸ್ ಅವಧಿ ವಿಸ್ತರಣೆ
ರಾಜ್ಯದ 1 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಹತ್ವದ ವಿನಾಯಿತಿ ನೀಡಿದೆ. 2025-26ನೇ ಸಾಲಿನ ಹಳೆಯ ಬಸ್ ಪಾಸ್ಗಳ ಮಾನ್ಯತಾ ಅವಧಿಯನ್ನು ಏಪ್ರಿಲ್ 10ರವರೆಗೆ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ವಾರ್ಷಿಕ ಪರೀಕ್ಷೆಗಳ ಸಮಯದಲ್ಲಿ ಸಾರಿಗೆ ಸಮಸ್ಯೆಯಾಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಶಾಲಾ ಪರೀಕ್ಷೆಗಳಿಗೆ ಹಾಜರಾಗಲು ಅನುಕೂಲವಾಗಲಿದೆ. ಈ ಆದೇಶದನ್ವಯ, ವಿದ್ಯಾರ್ಥಿಗಳು ತಮ್ಮ ಬಳಿ ಇರುವ ಹಳೆಯ ಪಾಸ್ಗಳನ್ನೇ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದರಿಂದ ಗ್ರಾಮೀಣ ಭಾಗದ ಸಾವಿರಾರು ವ
Apr 11 min read


ಕುದ್ಮಾರು ಜಂಕ್ಷನ್: ಕಾರು-ಬೈಕ್ ಭೀಕರ ಡಿಕ್ಕಿ
ಕಡಬ ತಾಲೂಕಿನ ಕಾಣಿಯೂರು ರಸ್ತೆಯ ಕುದ್ಮಾರು ಬಳಿ ಬುಧವಾರ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಗಾಯಗೊಂಡ ಸವಾರರನ್ನು ತಕ್ಷಣವೇ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
Apr 11 min read
Archive
bottom of page



