top of page
News Articles
Sathyapatha News Plus


ಗಾಯಕ ಅರಿಜಿತ್ ಸಿಂಗ್ ನಿವೃತ್ತಿ ಘೋಷಣೆ: ಸಂಗೀತ ಲೋಕಕ್ಕೆ ದಿಢೀರ್ ಶಾಕ್!
ಭಾರತೀಯ ಸಂಗೀತ ಲೋಕದ ಧ್ರುವತಾರೆ, ಸುಮಧುರ ಧ್ವನಿಯ ಗಾಯಕ ಅರಿಜಿತ್ ಸಿಂಗ್ ಅವರು ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಭಾರಿ ಅಚ್ಚರಿ ನೀಡಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಇನ್ನು ಮುಂದೆ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಅವಕಾಶಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ನಾನು ಈ ವೃತ್ತಿಜೀವನವನ್ನು ಇಲ್ಲಿಗೆ ಅಂತ್ಯಗೊಳಿಸುತ್ತಿದ್ದೇನೆ. ಇದೊಂದು ಅದ್ಭುತ ಪ್ರಯಾಣವಾಗಿತ್ತು" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಅರಿಜಿತ್ ಸಿಂಗ್ ಇಂದು ಭಾರತೀಯ ಸಂಗೀತ ಚಿತ್ರೋದ್
Jan 281 min read


ಬಜೆಟ್ಗೆ ಮುನ್ನ ‘ಹಲ್ವಾ ಸಂಪ್ರದಾಯ’: ದಶಕಗಳ ಹಳೆಯ ರಹಸ್ಯತಾ ಆಚರಣೆ
ನವದೆಹಲಿ: ಕೇಂದ್ರ ಬಜೆಟ್ ಮಂಡನೆಗೂ ಮುನ್ನ ನಡೆಯುವ ‘ಹಲ್ವಾ ಸಮಾರಂಭ’ವು ದಶಕಗಳಷ್ಟು ಹಳೆಯದಾದ ವಿಶಿಷ್ಟ ಸಂಪ್ರದಾಯವಾಗಿದೆ. ಸ್ವಾತಂತ್ರ್ಯ ನಂತರದಿಂದಲೇ ಬಜೆಟ್ ತಯಾರಿಕಾ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿ ಈ ಆಚರಣೆ ನಡೆದು ಬರುತ್ತಿದೆ. ಭಾರತೀಯ ಸಂಪ್ರದಾಯದಂತೆ ಯಾವುದೇ ಮಹತ್ವದ ಕಾರ್ಯ ಆರಂಭಕ್ಕೂ ಮೊದಲು ಸಿಹಿ ತಿನ್ನುವುದು ಶುಭವೆಂದು ಪರಿಗಣಿಸಲಾಗುತ್ತದೆ. ಅದೇ ನಂಬಿಕೆಯ ಹಿನ್ನೆಲೆಯಲ್ಲಿ, ಹಣಕಾಸು ಸಚಿವರು ನಾರ್ತ್ ಬ್ಲಾಕ್ನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಲ್ವಾ ವಿತರಿಸುವ ಮೂಲಕ ಬಜೆಟ್ ಮುದ್ರಣ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡುತ್ತಾರೆ. ಈ ಸಮಾರಂಭದ ನಂತರ ಬಜೆಟ್ಗೆ ಸಂಬಂಧಿಸ
Jan 271 min read


ಭಾರತ-ಯುರೋಪಿಯನ್ ಒಕ್ಕೂಟದ ನಡುವೆ ಐತಿಹಾಸಿಕ ವ್ಯಾಪಾರ ಒಪ್ಪಂದ: ಕರ್ನಾಟಕದ ರಫ್ತು ವಲಯಕ್ಕೆ 6.4 ಲಕ್ಷ ಕೋಟಿ ರೂ. ಬೂಸ್ಟ್!
ನವದೆಹಲಿ: ಭಾರತ ಮತ್ತು ಯುರೋಪಿಯನ್ ಯೂನಿಯನ್ ನಡುವಿನ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದವನ್ನು (FTA) ಘೋಷಿಸಿದ್ದಾರೆ. ಜಾಗತಿಕ ಜಿಡಿಪಿಯ ಶೇ. 25ರಷ್ಟು ಪಾಲನ್ನು ಹೊಂದಿರುವ ಈ ಒಪ್ಪಂದವು, ವಿಶ್ವ ವ್ಯಾಪಾರದ ಮೂರನೇ ಒಂದು ಭಾಗವನ್ನು ಒಳಗೊಂಡಿದೆ. 140 ಕೋಟಿ ಭಾರತೀಯರು ಹಾಗೂ ಕೋಟ್ಯಂತರ ಯುರೋಪಿಯನ್ನರಿಗೆ ಈ ಒಪ್ಪಂದವು ಉದ್ಯೋಗ ಮತ್ತು ಆರ್ಥಿಕ ಪ್ರಗತಿಯ ಹೊಸ ಬಾಗಿಲುಗಳನ್ನು ತೆರೆಯಲಿದೆ ಎಂದು ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಒಪ್ಪಂದದಿಂದಾಗಿ ಕರ್ನಾಟಕದ ಕೈಗಾರಿಕಾ ಕ್ಷೇತ್ರಕ್ಕೆ ಅಭೂತಪೂರ್
Jan 271 min read


ಗಣರಾಜ್ಯೋತ್ಸವ ಸಂಭ್ರಮದ ನಡುವೆ ದುರಂತ: ಸ್ಪೀಕರ್ ಬಿದ್ದು ಮೂರು ವರ್ಷದ ಬಾಲಕಿ ಸಾವು
ಮುಂಬೈ: ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದ ಮುಂಬೈನ ವಿಖ್ರೋಲಿ ಪ್ರದೇಶದಲ್ಲಿ ಶನಿವಾರ ಅತ್ಯಂತ ದಾರುಣ ಘಟನೆಯೊಂದು ಸಂಭವಿಸಿದೆ. ಹಬ್ಬದ ಆಚರಣೆಗಾಗಿ ಅಳವಡಿಸಲಾಗಿದ್ದ ಬೃಹತ್ ಧ್ವನಿವರ್ಧಕವೊಂದು (ಸ್ಪೀಕರ್) ಆಕಸ್ಮಿಕವಾಗಿ ಕುಸಿದು ಬಿದ್ದ ಪರಿಣಾಮ, ಅಲ್ಲಿಯೇ ಆಟವಾಡುತ್ತಿದ್ದ ಮೂರು ವರ್ಷದ ಪುಟ್ಟ ಬಾಲಕಿ ಮೃತಪಟ್ಟಿದ್ದಾಳೆ. ಸಂಭ್ರಮದ ವಾತಾವರಣವಿದ್ದ ಜಾಗದಲ್ಲಿ ಕ್ಷಣಾರ್ಧದಲ್ಲಿ ಮಗು ಪ್ರಾಣ ಕಳೆದುಕೊಂಡಿರುವುದು ಇಡೀ ಭಾಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಈ ಮನಕಲಕುವ ಘಟನೆಯ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
Jan 271 min read


ವಿಧವಾ ಮರು ವಿವಾಹಕ್ಕೆ ಬಂಪರ್ ಕೊಡುಗೆ: ಕರ್ನಾಟಕ ಸರ್ಕಾರದಿಂದ 3 ಲಕ್ಷ ರೂ. ಪ್ರೋತ್ಸಾಹಧನ!
ಬೆಂಗಳೂರು: ಸಮಾಜದಲ್ಲಿ ವಿಧವೆಯರಿಗೆ ಗೌರವಯುತ ಬದುಕು ನೀಡಲು ಮತ್ತು ಅವರ ಜೀವನಕ್ಕೆ ಭದ್ರತೆ ಒದಗಿಸಲು ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಪರಿಶಿಷ್ಟ ಜಾತಿಯ (SC) ವಿಧವೆಯರನ್ನು ಮರು ವಿವಾಹವಾಗುವವರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರವು ಭಾರಿ ಮೊತ್ತಕ್ಕೆ ಏರಿಕೆ ಮಾಡಿದೆ. ಹೌದು, ಈ ಹಿಂದೆ ಇದ್ದ 2 ಲಕ್ಷ ರೂ. ಗಳ ಮೊತ್ತವನ್ನು ಈಗ 3 ಲಕ್ಷ ರೂ. ಗಳಿಗೆ ಹೆಚ್ಚಿಸುವ ಮೂಲಕ ಸಮಾಜ ಕಲ್ಯಾಣ ಇಲಾಖೆಯು ಹೊಸ ಆದೇಶ ಹೊರಡಿಸಿದೆ. ಈ ಯೋಜನೆಯು ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಲಿದೆ. ಯೋಜನೆಯ ಮುಖ್ಯಾಂಶಗಳು ವಿಧವೆಯರ ಜೀವನದಲ್ಲಿ ಹೊಸ
Jan 272 min read


ಮನೆ ಮಾಲೀಕರಿಗೆ ಪೊಲೀಸರ ಖಡಕ್ ವಾರ್ನಿಂಗ್: ವಿದೇಶಿ ಪ್ರಜೆಗಳಿಗೆ ಬಾಡಿಗೆ ನೀಡುವ ಮುನ್ನ ಎಚ್ಚರ!
ಹೆಚ್ಚುತ್ತಿರುವ ಡ್ರಗ್ಸ್ ದಂಧೆ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ವಿದೇಶಿ ಪ್ರಜೆಗಳ ಕೈವಾಡ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ, ನಗರ ಪೊಲೀಸರು ಮನೆ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ ನೀಡುವ ಸಂದರ್ಭದಲ್ಲಿ 'ಫಾರ್ಮ್-16' (C-Form/Form-16) ಅನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸಲ್ಲಿಸುವುದು ಇನ್ನು ಮುಂದೆ ಕಡ್ಡಾಯವಾಗಿದೆ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿ ಮಾಹಿತಿ ನೀಡದೆ ಬಾಡಿಗೆ ನೀಡಿದಲ್ಲಿ, ಅಂತಹ ಮನೆ ಮಾಲೀಕರ ವಿರುದ್ಧವೇ ನೇರವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಇತ್ತೀಚಿನ ದಿನಗ
Jan 271 min read


ಬೆಂಗಳೂರು: ಬಿಎಂಟಿಸಿ ಬಸ್ಸಿಗೆ ರೈಲು ಡಿಕ್ಕಿ;
ಬೆಂಗಳೂರು: ನಗರದ ಕಾಡುಗೋಡಿಯ ಸಾದರಮಂಗಲ ರೈಲ್ವೆ ಕ್ರಾಸಿಂಗ್ ಬಳಿ ಬಿಎಂಟಿಸಿ ಬಸ್ ಮತ್ತು ರೈಲಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸಾದರಮಂಗಲದಲ್ಲಿ ಪ್ರಯಾಣಿಕರನ್ನು ಇಳಿಸಿ ಖಾಲಿ ಬಸ್ಸು ಡಿಪೋಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿ ಪ್ರಯಾಣಿಕರು ಯಾರೂ ಇಲ್ಲದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ರೈಲಿನ ಡಿಕ್ಕಿಯ ರಭಸಕ್ಕೆ ಬಿಎಂಟಿಸಿ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಡಿಪೋ ಸಂಖ್ಯೆ 51ಕ್ಕೆ ಸೇರಿದ್ದ ಈ ಬಸ್ಸು, ಇಕ್ಕಟ್ಟಾದ ರಸ್ತೆಯಲ್ಲಿ ಹಿಂಬದಿಗೆ ಚಲಿಸಿ ನಂತರ ಮುಂದಕ್ಕೆ ಹೋಗಲು ಪ್ರಯತ್ನಿಸುತ್ತಿತ್ತು. ಈ ಸಂದರ್ಭದಲ್ಲಿ ಚಾಲಕನು ಹಳಿ
Jan 271 min read


ಕೋಡಿಬೆಂಗ್ರೆ ಬಳಿ ಸಮುದ್ರಕ್ಕೆ ಮಗುಚಿದ ಪ್ರವಾಸಿ ಬೋಟ್; 15 ಮಂದಿ ರಕ್ಷಣೆ, ನಾಲ್ವರ ಸ್ಥಿತಿ ಗಂಭೀರ
ಉಡುಪಿ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕೋಡಿಬೆಂಗ್ರೆ ಅಳಿವೆ ಬಾಗಿಲಿನ ಬಳಿ ಅಲೆಗಳ ಅಬ್ಬರಕ್ಕೆ ಸಿಲುಕಿ ಪ್ರವಾಸಿ ಬೋಟ್ ಒಂದು ಸಮುದ್ರಕ್ಕೆ ಮಗುಚಿದೆ. ಬೋಟ್ನಲ್ಲಿ ವಿಹಾರಕ್ಕೆ ತೆರಳಿದ್ದ 15 ಮಂದಿ ಪ್ರವಾಸಿಗರು ಆಕಸ್ಮಿಕವಾಗಿ ಸಮುದ್ರದ ನೀರಿಗೆ ಬಿದ್ದಿದ್ದು, ಸ್ಥಳೀಯ ಮೀನುಗಾರರು ಮತ್ತು ಸಾರ್ವಜನಿಕರ ಸಮಯಪ್ರಜ್ಞೆಯಿಂದ ದೊಡ್ಡ ದುರಂತವೊಂದು ತಪ್ಪಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಸಮುದ್ರಕ್ಕೆ ಇಳಿದು ಎಲ್ಲಾ 15 ಮಂದಿಯನ್ನು ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೀರುಪಾಲಾದವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತಕ್ಷಣವೇ ಮಲ್ಪೆಯ ಖಾಸಗಿ ಆಸ್ಪತ
Jan 271 min read


ಇಂದಿನ ಚಿನ್ನದ ದರ
ಬೆಂಗಳೂರಿನಲ್ಲಿ ಇಂದು (ಜನವರಿ 26, 2026) ಚಿನ್ನದ ಬೆಲೆ ಭಾರಿ ಏರಿಕೆ ಕಂಡಿದೆ. 24 ಕ್ಯಾರೆಟ್ನ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಮ್ಗೆ ₹16,000 ಗಡಿ ದಾಟಿದೆ. ಇಂದಿನ ಪ್ರಮುಖ ದರ ವಿವರಗಳು ಇಲ್ಲಿವೆ (1 ಗ್ರಾಮ್ಗೆ): 24 ಕ್ಯಾರೆಟ್ ಚಿನ್ನ (ಅಪರಂಜಿ): ₹16,271 (ನಿನ್ನೆಯ ದರಕ್ಕಿಂತ ₹245 ಏರಿಕೆ). 22 ಕ್ಯಾರೆಟ್ ಚಿನ್ನ (ಆಭರಣ): ₹14,915 (ನಿನ್ನೆಯ ದರಕ್ಕಿಂತ ₹225 ಏರಿಕೆ). 18 ಕ್ಯಾರೆಟ್ ಚಿನ್ನ: ₹12,203 (ನಿನ್ನೆಯ ದರಕ್ಕಿಂತ ₹184 ಏರಿಕೆ). ಬೆಳ್ಳಿ ಬೆಲೆ: ಪ್ರತಿ 1 ಗ್ರಾಮ್ಗೆ ₹340 ಮತ್ತು 1 ಕೆಜಿಗೆ ₹3,40,000 ಆಗಿದೆ.
Jan 271 min read


ಬೆಂಗಳೂರು: ಎಟಿಎಂಗೆ ಹಣ ತುಂಬುವ ನೆಪದಲ್ಲಿ ಒಂದು ಕೋಟಿಗೂ ಅಧಿಕ ನಗದಿನೊಂದಿಗೆ ಸಿಬ್ಬಂದಿ ಪರಾರಿ
ಬೆಂಗಳೂರು: ನಗರದ ಎಟಿಎಂಗಳಿಗೆ ನಗದು ಠೇವಣಿ ಮಾಡುವ ಜವಾಬ್ದಾರಿ ಹೊತ್ತಿದ್ದ ಖಾಸಗಿ ಕಂಪನಿಯ ಸಿಬ್ಬಂದಿಯೇ ಒಂದು ಕೋಟಿ ರೂಪಾಯಿಗೂ ಅಧಿಕ ಹಣವನ್ನು ದೋಚಿ ಪರಾರಿಯಾದ ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಿಟಾಚಿ ಪೇಮೆಂಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಬ್ಬಂದಿಗಳು ಆ್ಯಕ್ಸಿಸ್ ಬ್ಯಾಂಕ್ನ ಎಟಿಎಂಗಳಿಗೆ ಜಮಾ ಮಾಡಬೇಕಿದ್ದ ಹಣದೊಂದಿಗೆ ನಾಪತ್ತೆಯಾಗಿದ್ದಾರೆ. ನಗರದಲ್ಲಿ ಇತ್ತೀಚೆಗಷ್ಟೇ 400 ಕೋಟಿ ರೂಪಾಯಿ ದರೋಡೆ ಪ್ರಕರಣ ಸದ್ದು ಮಾಡುತ್ತಿರುವಾಗಲೇ ಈ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ. ಜನವರಿ 19ರಂದು ಕೋರಮಂಗಲದ ಆ್ಯಕ್ಸಿಸ್
Jan 271 min read


ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರ ಮಹಾಪೂರ: ನಾಲ್ಕು ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಭೇಟಿ
ಸುಬ್ರಹ್ಮಣ್ಯ: ದಕ್ಷಿಣ ಭಾರತದ ಪವಿತ್ರ ನಾಗಾರಾಧನಾ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸರಣಿ ರಜೆಗಳ ಹಿನ್ನೆಲೆಯಲ್ಲಿ ಭಕ್ತ ಸಾಗರವೇ ಹರಿದುಬಂದಿದೆ. ಕಳೆದ ನಾಲ್ಕು ದಿನಗಳಲ್ಲಿ ಹಗಲು-ರಾತ್ರಿ ಎನ್ನದೆ ಸುಮಾರು ಎರಡು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಈ ಭಾರಿ ಭೇಟಿಯಿಂದಾಗಿ ದೇವಸ್ಥಾನದ ಹುಂಡಿ, ವಿವಿಧ ಸೇವೆಗಳು, ಅನ್ನದಾನ ದೇಣಿಗೆ, ವಸತಿ ಛತ್ರಗಳ ಬಾಡಿಗೆ ಹಾಗೂ ಹರಿಕೆ ರೂಪದ ಚಿನ್ನ-ಬೆಳ್ಳಿಯ ದೇಣಿಗೆ ಸೇರಿದಂತೆ ಒಟ್ಟು ಆದಾಯವು ನಾಲ್ಕು ಕೋಟಿ ರೂಪಾಯಿಗಳನ್ನೂ ಮೀರಲಿದೆ ಎಂದು ಅಂದಾಜಿಸಲಾಗಿದೆ. ಭಕ್ತರ ಸಂಖ್ಯೆ ಗಣನೀಯವಾಗಿ ಏರಿ
Jan 271 min read


ರಾಜ್ಯಾದ್ಯಂತ ಮುಂದುವರಿಯಲಿರುವ ಚಳಿ: ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು: ಕರ್ನಾಟಕದಾದ್ಯಂತ ಮುಂದಿನ ನಾಲ್ಕು ದಿನಗಳ ಕಾಲ ಒಣ ಹವೆ ಮುಂದುವರಿಯಲಿದ್ದು, ಚಳಿಯ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ ಇರಲಿದ್ದು, ಬೆಳಗಿನ ಜಾವ ದಟ್ಟ ಮಂಜು ಕವಿಯುವ ಸಾಧ್ಯತೆಯಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 27°C ಮತ್ತು ಕನಿಷ್ಠ 18°C ತಾಪಮಾನ ದಾಖಲಾಗುವ ನಿರೀಕ್ಷೆಯಿದೆ. ಪ್ರಮುಖ ನಗರಗಳ ತಾಪಮಾನ ಗಮನಿಸುವುದಾದರೆ, ಮಂಗಳೂರಿನಲ್ಲಿ 31-24°C, ಶಿವಮೊಗ್ಗದಲ್ಲಿ 32-19°C ಹಾಗೂ ಬೆಳಗಾವಿಯಲ್ಲಿ 29-19°C ಇರಲಿದೆ. ಕರಾವಳಿ ಮತ್ತು ಮಲೆ
Jan 271 min read


ಸೌದಿ ಉಮ್ರಾ ವೀಸಾ ನಿಯಮದಲ್ಲಿ ಭಾರಿ ಬದಲಾವಣೆ: ಹಜ್ ಸಿದ್ಧತೆ ಹಿನ್ನೆಲೆ ಯಾತ್ರಿಕರಿಗೆ ಹೊಸ ಡೆಡ್ಲೈನ್ ಫಿಕ್ಸ್!"
ಸೌದಿ ಅರೇಬಿಯಾ ಸರ್ಕಾರವು ಉಮ್ರಾ ಯಾತ್ರಿಕರಿಗಾಗಿ ಹೊಸ ವೀಸಾ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಯಾತ್ರೆಯ ಅವಧಿ ಮತ್ತು ವೀಸಾ ಮಾನ್ಯತೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಹಜ್ ಯಾತ್ರೆಯ ಸಿದ್ಧತೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಸೌದಿ ಸಚಿವಾಲಯದ ಆದೇಶದಂತೆ ಉಮ್ರಾ ವೀಸಾ ಹೊಂದಿರುವ ಯಾತ್ರಿಕರು ದುಲ್-ಖಾದ್ 1, 1447 ಹಿಜ್ರಿಯೊಳಗೆ ಕಡ್ಡಾಯವಾಗಿ ದೇಶವನ್ನು ತೊರೆಯಬೇಕಿದೆ. ಉಮ್ರಾ ವೀಸಾ ಪಡೆದವರು ಸೌದಿಗೆ ಆಗಮಿಸಲು ಶವ್ವಾಲ್ 15, 1447 ಹಿಜ್ರಿಯನ್ನು ಅಂತಿಮ ಗಡುವು ಎಂದು ನಿಗದಿಪಡಿಸಲಾಗಿದೆ. ವೀಸಾ ಮಾನ್ಯತೆಯ ಅವಧಿಯ ಬಗ್ಗೆಯೂ ಸಚಿವಾಲಯವು ಪ್ರಮುಖ ಸ್ಪಷ್
Jan 261 min read


ಸತತ ಮೂರು ದಿನ ಬ್ಯಾಂಕ್ ಬಂದ್: ಯಾವೆಲ್ಲ ಬ್ಯಾಂಕುಗಳ ಸೇವೆ ಸ್ಥಗಿತ?
ನಾಳೆ (ಜನವರಿ 27) ಬ್ಯಾಂಕ್ ಮುಷ್ಕರ ನಡೆಯಲಿದೆ. ಹೀಗಾಗಿ, ದೇಶಾದ್ಯಂತ ಈ ಬ್ಯಾಂಕುಗಳು ಮಂಗಳವಾರವೂ ಮುಚ್ಚಿರುತ್ತವೆ. ಭಾರತದಾದ್ಯಂತ ಬ್ಯಾಂಕ್ ಉದ್ಯೋಗಿ ಮತ್ತು ಅಧಿಕಾರಿ ಸಂಘಗಳು ಜನವರಿ 27ರಂದು ರಾಷ್ಟ್ರವ್ಯಾಪಿ ಮುಷ್ಕರವನ್ನು ಘೋಷಿಸಿವೆ. ಇದು ಹೆಚ್ಚಿನ ಸಾರ್ವಜನಿಕ ವಲಯದ ಬ್ಯಾಂಕುಗಳ ಸೇವೆಗಳನ್ನು ಅಡ್ಡಿಪಡಿಸುವ ನಿರೀಕ್ಷೆಯಿದೆ. ಈ ಮುಷ್ಕರಕ್ಕೆ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿದೆ. ತಮಗೆ ವಾರದಲ್ಲಿ 5 ದಿನಗಳ ಕಾಲ ಮಾತ್ರ ಕೆಲಸ ಮಾಡಲು ಅವಕಾಶ ನೀಡಬೇಕು, ಶನಿವಾರ ಹಾಗೂ ಭಾನುವಾರ ರಜೆ ನೀಡಬೇಕು ಎಂದು ಒತ್ತಾಯಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್
Jan 261 min read


ಬಾಹ್ಯಾಕಾಶ ವೀರ ಶುಭಾಂಶು ಶುಕ್ಲಾಗೆ ದೇಶದ ಅತ್ಯುನ್ನತ 'ಅಶೋಕ ಚಕ್ರ' ಗೌರವ:
2026ರ ಗಣರಾಜ್ಯೋತ್ಸವದ ಐತಿಹಾಸಿಕ ಸಂದರ್ಭದಲ್ಲಿ, ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ 'ಅಶೋಕ ಚಕ್ರ' ನೀಡಿ ಗೌರವಿಸಿದರು. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿ, ಅವರು ತೋರಿದ ಅಪ್ರತಿಮ ಧೈರ್ಯ ಮತ್ತು ತಾಂತ್ರಿಕ ನೈಪುಣ್ಯವನ್ನು ಪರಿಗಣಿಸಿ ಈ ಶ್ರೇಷ್ಠ ಗೌರವವನ್ನು ಅರ್ಪಿಸಲಾಗಿದೆ. ಅಶೋಕ ಚಕ್ರವು ಯುದ್ಧಭೂಮಿಯ ಹೊರಗೆ ತೋರುವ ಅದ್ಭುತ ಸಾಹಸಕ್ಕಾಗಿ ನೀಡಲಾಗುವ ಅತ್ಯುನ್ನತ
Jan 261 min read


ಗಗನಕ್ಕೆರುತ್ತಿರುವ ಚಿನ್ನದ ದರ- ಇಂದಿನ ದರ ಚೆಕ್ ಮಾಡಿ
ಇಂದು (ಜನವರಿ 26, 2026) ಚಿನ್ನದ ಬೆಲೆ ಭಾರಿ ಏರಿಕೆ ಕಂಡಿದೆ. 24 ಕ್ಯಾರೆಟ್ನ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಮ್ಗೆ ₹16,000 ಗಡಿ ದಾಟಿದೆ. ಇಂದಿನ ಪ್ರಮುಖ ದರ ವಿವರಗಳು ಇಲ್ಲಿವೆ (1 ಗ್ರಾಮ್ಗೆ): 24 ಕ್ಯಾರೆಟ್ ಚಿನ್ನ (ಅಪರಂಜಿ): ₹16,271 (ನಿನ್ನೆಯ ದರಕ್ಕಿಂತ ₹245 ಏರಿಕೆ). 22 ಕ್ಯಾರೆಟ್ ಚಿನ್ನ (ಆಭರಣ): ₹14,915 (ನಿನ್ನೆಯ ದರಕ್ಕಿಂತ ₹225 ಏರಿಕೆ). 18 ಕ್ಯಾರೆಟ್ ಚಿನ್ನ: ₹12,203 (ನಿನ್ನೆಯ ದರಕ್ಕಿಂತ ₹184 ಏರಿಕೆ). ಬೆಳ್ಳಿ ಬೆಲೆ: ಪ್ರತಿ 1 ಗ್ರಾಮ್ಗೆ ₹340 ಮತ್ತು 1 ಕೆಜಿಗೆ ₹3,40,000 ಆಗಿದೆ.
Jan 261 min read


ಕೆಲಿಂಜ ಸರ್ಕಾರಿ ಶಾಲೆಯಲ್ಲಿ ಗಣರಾಜ್ಯೋತ್ಸವದ ಸಡಗರ: ರಾಷ್ಟ್ರಧ್ವಜಕ್ಕೆ ಗೌರವ ನಮನ
ದ. ಕ.ಪಂ. ಹಿ. ಪ್ರಾ. ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಇಂದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶಾಲಾ ಆವರಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಅಧ್ಯಕ್ಷರಾದ ಮೋಹಿತ್ ಶೆಟ್ಟಿ ಅವರು ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವ ಹಾಗೂ ರಾಷ್ಟ್ರಪ್ರೇಮದ ಬಗ್ಗೆ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷೆ ಜಯಂತಿ, ಶಾಲಾ ಮುಖ್ಯೋಪಾಧ್ಯಾಯರು, ಕ್ಲಸ್ಟರ್ ಸಿಆರ್ಪಿ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಅಲ್ಲದೆ ಪಂಚಾಯತ್ ಸದಸ್ಯರಾದ ಪ್ರಸಾದ್ ಮತ್ತು ಸಂದೀಪ್, ಎಸ್
Jan 261 min read


ದೇಶಾದ್ಯಂತ 77ನೇ ಗಣರಾಜ್ಯೋತ್ಸವ ಸಡಗರ: 'ವಿಕಸಿತ ಭಾರತ' ಸಂಕಲ್ಪದೊಂದಿಗೆ ಜನತೆಗೆ ಶುಭ ಕೋರಿದ ಮೋದಿ!
ನವದೆಹಲಿ: ದೇಶದ 77ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಭ್ರಮ ಮನೆಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ (National War Memorial) ಭೇಟಿ ನೀಡಿ, ದೇಶದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮ ಸೈನಿಕರಿಗೆ ಪುಷ್ಪಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ರಕ್ಷಣಾ ಸಚಿವರು ಸೇರಿದಂತೆ ಮೂರು ಸೇನಾ ಪಡೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಈ ಬಾರಿಯ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಗಳಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಮತ್ತು ಯುರೋಪಿಯನ್ ಕೌನ್ಸಿಲ
Jan 261 min read


ಬೆಳ್ತಂಗಡಿ: ವಿದ್ಯುತ್ ಪಂಪ್ ಆನ್ ಮಾಡುವಾಗ ಶಾಕ್ ತಗುಲಿ ವ್ಯಕ್ತಿ ದುರ್ಮರಣ
ಬೆಳ್ತಂಗಡಿ: ತಾಲೂಕಿನ ಗುರಿಪಳ್ಳದಲ್ಲಿ ಗಣರಾಜ್ಯೋತ್ಸವದ ದಿನವಾದ ಇಂದು (ಜನೆವರಿ 26) ಬೆಳಿಗ್ಗೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ 48 ವರ್ಷದ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಗುರಿಪಳ್ಳದ ಕಡಿಯಾರು ಗ್ರಾಮದ ನಿವಾಸಿ ಶಿವಪ್ರಸಾದ್ ಆದಪ್ಪ ಎಂಬವರೇ ಮೃತಪಟ್ಟ ದುರ್ದೈವಿ. ಮನೆಯ ಬಳಿಯ ನೀರಿನ ಪಂಪ್ ಆನ್ ಮಾಡಲು ಹೋದಾಗ ಈ ಘೋರ ದುರಂತ ಸಂಭವಿಸಿದೆ. ಕುಟುಂಬದ ಮೂಲಗಳ ಪ್ರಕಾರ, ಶಿವಪ್ರಸಾದ್ ಅವರು ಎಂದಿನಂತೆ ತಮ್ಮ ಬೆಳಗಿನ ದಿನಚರಿಯ ಕೆಲಸಕ್ಕೆಂದು ಹೊರಬಂದಿದ್ದರು. ಈ ವೇಳೆ ಪಂಪ್ ಸೆಟ್ ಸ್ವಿಚ್ ಹಾಕುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಗಂಭೀರವಾಗಿ ಗಾಯಗೊಂಡು ನೆಲಕ್ಕೆ ಉರುಳಿ ಬಿ
Jan 261 min read


ಶರಣ್ ಪಂಪ್ವೆಲ್ಗೆ ಜಿಲ್ಲಾ ಪ್ರವೇಶ ನಿಷೇಧ: ಶಾಂತಿ ಕಾಪಾಡಲು ಜಿಲ್ಲಾಧಿಕಾರಿ ಕ್ರಮ
ಹಾಸನ: ಶ್ರವಣಬೆಳಗೊಳ ಹಾಗೂ ಅರಸೀಕೆರೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ 'ಹಿಂದೂ ಸಮಾಜೋತ್ಸವ' ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಅವರಿಗೆ ಜಿಲ್ಲಾ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಆದೇಶ ಹೊರಡಿಸಿದ್ದಾರೆ. ಶರಣ್ ಪಂಪ್ವೆಲ್ ಅವರು ಈ ಹಿಂದೆ ವಿವಿಧ ಜಿಲ್ಲೆಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈ ಇತಿಹಾಸವನ್ನು ಗಮನಿಸಿ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು
Jan 261 min read
Archive
bottom of page



