top of page
News Articles
Sathyapatha News Plus


ಶ್ರೀಲಂಕಾದಲ್ಲಿ 'ದಿತ್ವಾ' ಚಂಡಮಾರುತಕ್ಕೆ 123 ಬಲಿ: ಭಾರತದಿಂದ ನೆರವಿನ ಹಸ್ತ!
ಭಾರಿ ಅವಾಂತರ ಸೃಷ್ಟಿಸಿರುವ 'ದಿತ್ವಾ' ಚಂಡಮಾರುತವು ಶ್ರೀಲಂಕಾದ ಕರಾವಳಿಗೆ ಅಪ್ಪಳಿಸಿ ದ್ವೀಪರಾಷ್ಟ್ರವನ್ನು ತತ್ತರಿಸುವಂತೆ ಮಾಡಿದೆ. ಸತತ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಉಂಟಾಗಿರುವ ಭೀಕರ ಪ್ರವಾಹದಿಂದಾಗಿ ಇದುವರೆಗೆ 123 ಜನರು ಪ್ರಾಣ ಕಳೆದುಕೊಂಡಿದ್ದು, 130ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (DMC) ತಿಳಿಸಿದೆ. ಪ್ರವಾಹ ಸಂತ್ರಸ್ತರಾಗಿರುವ ಸುಮಾರು 43,995 ಜನರನ್ನು ಸರ್ಕಾರಿ ಸ್ವಾಮ್ಯದ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ರಾಜಧಾನಿ ಕೊಲಂಬೊ ಸೇರಿದಂತೆ ಹಲವು ಪ್ರಮುಖ ಭಾಗಗಳಲ್ಲಿ ಪ್ರವಾಹ ಸೃಷ್ಟಿಯಾಗಿದ್ದು,
Dec 21 min read


ಪ್ರಧಾನಿ ಮೋದಿ 'ನಾಟಕ' ಎಂಬ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ತಿರುಗೇಟು
ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ವರ್ತನೆಯನ್ನು 'ನಾಟಕ' ಎಂದು ಟೀಕಿಸಿದ್ದಕ್ಕೆ ಕಾಂಗ್ರೆಸ್ ನಾಯಕಿ ಹಾಗೂ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿಯವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಪ್ರಿಯಾಂಕಾ ಗಾಂಧಿ, ಸಂಸತ್ತಿನಲ್ಲಿ ಜನರ ಜ್ವಲಂತ ಸಮಸ್ಯೆಗಳನ್ನು ಎತ್ತಿ ತೋರಿಸುವುದು ನಾಟಕವಲ್ಲ. ಬದಲಾಗಿ, ಈ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ನೀಡದೆ ಸರ್ಕಾರವೇ ಪಲಾಯನ ಮಾಡ
Dec 21 min read


ನೆರೆಯ ದೇಶಗಳಿಂದ ಅಡಿಕೆ ಆಮದು: ಸಂಸತ್ತಿನಲ್ಲಿ ಗಂಭೀರ ವಿಷಯ ಪ್ರಸ್ತಾಪಿಸಿದ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ
ಸುಂಕಮುಕ್ತ ವ್ಯವಸ್ಥೆಯ ದುರ್ಬಳಕೆಯಿಂದ ದೇಶದ ಅಡಿಕೆ ಬೆಳೆಗಾರರಿಗೆ ಆರ್ಥಿಕ ಸಂಕಷ್ಟ: ಸಂಸದರ ಮನವಿ ನವದೆಹಲಿ: ಭೂತಾನ್, ಮಯನ್ಮಾರ್ ಮತ್ತು ಶ್ರೀಲಂಕಾದಂತಹ ನೆರೆಯ ದೇಶಗಳಿಂದ ಭಾರೀ ಪ್ರಮಾಣದಲ್ಲಿ ಅಡಿಕೆ ಆಮದು ಆಗುತ್ತಿರುವುದು ದೇಶದ ಅಡಿಕೆ ಬೆಳೆಗಾರರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯ ಚಳಿಗಾಲದ ಅಧಿವೇಶನದ ಮೊದಲ ದಿನವೇ ಪ್ರಸ್ತಾಪಿಸಿ ಸದನದ ಗಮನ ಸೆಳೆದಿದ್ದಾರೆ. ನೆರೆಯ ಸಣ್ಣ ದೇಶಗಳಿಗೆ ವ್ಯಾಪಾರ ಉತ್ತೇಜನ ನೀಡುವ ಸದುದ್ದೇಶದಿಂದ ಜಾರಿಯಲ್ಲಿರುವ ಸುಂಕ ಮುಕ್ತ (Duty-Free Quota-Free - DFQF) ವ್ಯವಸ್ಥೆಯಡಿ ಶೂನ್ಯ ಸು
Dec 21 min read


ಪುತ್ತೂರಿನಲ್ಲಿ ಮುಂದುವರಿದ ಬಿಜೆಪಿ-ಪುತ್ತಿಲ ಪರಿವಾರ ಜಟಾಪಟಿ: ಕಾರ್ಯಕ್ರಮದಿಂದ ಬಿಜೆಪಿ ಉಪಾಧ್ಯಕ್ಷ ಹೊರಕ್ಕೆ!
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಮುಸುಕಿನ ಜಟಾಪಟಿ ತಾರಕಕ್ಕೇರಿದೆ. ಇತ್ತೀಚೆಗೆ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಈ ಭಿನ್ನಮತ ಸ್ಫೋಟಗೊಂಡಿದ್ದು, ಪುತ್ತಿಲ ಪರಿವಾರದ ಕಾರ್ಯಕರ್ತರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರನ್ನು ಕಾರ್ಯಕ್ರಮದಿಂದ ಹೊರದಬ್ಬಿದ ಘಟನೆ ವರದಿಯಾಗಿದೆ. ರಾಜಕೀಯ ಕೆಸರೆರೆಚಾಟ ಈಗ ದೇವರ ಕಾರ್ಯಕ್ರಮಕ್ಕೂ ಹಬ್ಬಿರುವುದು ಸ್ಥಳೀಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯು ಪುತ್ತೂರಿನಲ್ಲಿ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ತಿಕ್ಕಾಟವನ್ನು ಮತ
Dec 11 min read


ಇಂದಿನ ಚಿನ್ನದ ದರ
ಇಂದಿನ (ನವೆಂಬರ್ 20, 2025) ಚಿನ್ನದ ದರಗಳು ಇಲ್ಲಿವೆ. ಕರ್ನಾಟಕದ ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಕರ್ನಾಟಕದಲ್ಲಿ ಇಂದಿನ ಚಿನ್ನದ ದರ (ಪ್ರತಿ 10 ಗ್ರಾಂಗೆ): 24 ಕ್ಯಾರೆಟ್ ಚಿನ್ನ: ₹1,24,690 (ನಿನ್ನೆಗೆ ಹೋಲಿಸಿದರೆ ₹170 ಇಳಿಕೆ) 22 ಕ್ಯಾರೆಟ್ ಚಿನ್ನ: ₹1,14,300 (ನಿನ್ನೆಗೆ ಹೋಲಿಸಿದರೆ ₹150 ಇಳಿಕೆ)
Dec 11 min read


ಮಹಿಳೆಯರ ರಕ್ಷಣೆಗಾಗಿ 'ಸುರಕ್ಷಾ' SOS ಆ್ಯಪ್ ಲೋಕಾರ್ಪಣೆ: ತುರ್ತು ನೆರವಿಗೆ ತಕ್ಷಣದ ಸ್ಪಂದನೆ
ಮಹಿಳೆಯರ ಸುರಕ್ಷತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ತುಮಕೂರು ಪೊಲೀಸರು ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಬೆಂಗಳೂರಿನ ನಂತರ ಇದೀಗ ತುಮಕೂರಿನಲ್ಲೂ 'ಸುರಕ್ಷಾ' SOS ಆ್ಯಪ್ಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಕೆಲಸಕ್ಕೆ ಹೋಗುವ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು ಹಾಗೂ ನಿರ್ಜನ ಪ್ರದೇಶಗಳಲ್ಲಿ ಸಂಚರಿಸುವಾಗ ಎದುರಾಗುವ ಯಾವುದೇ ಆತಂಕ ಅಥವಾ ಅಪಾಯಕಾರಿ ಸನ್ನಿವೇಶಗಳಲ್ಲಿ ತ್ವರಿತ ನೆರವು ಒದಗಿಸಲು ಈ ಆ್ಯಪ್ ಅತ್ಯಂತ ಪರಿಣಾಮಕಾರಿ ಸಾಧನವಾಗಲಿದೆ. ಮಹಿಳಾ ರಕ್ಷಣೆಗೆ ಪ್ರಾಮುಖ್ಯತೆ ನೀಡುವ ರಾಜ್ಯ ಸರ್ಕಾರದ ಯೋಜನೆಯಡಿ, ತುಮಕೂರು ಸ್ಮಾರ್ಟ್ ಸಿಟಿ ಘಟಕವು ಈ ಮಹತ್ವದ ಆ್ಯಪ್ ಅನ್ನು ಅಭಿವೃದ್ಧಿ
Dec 11 min read


ತಂಬಾಕು ಮತ್ತು ಪಾನ್ ಮಸಾಲಾ ಮೇಲೆ ಹೊಸ ಸೆಸ್ ವಿಧಿಸುವ ಮಸೂದೆ ಮಂಡನೆ: ಬೆಲೆ ಇಳಿಕೆ ತಡೆಯಲು ಸರ್ಕಾರದ ನಿರ್ಧಾರ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ತಂಬಾಕು, ತಂಬಾಕು ಉತ್ಪನ್ನಗಳು ಮತ್ತು ಪಾನ್ ಮಸಾಲಾ ಮೇಲೆ ಹೊಸ ಸೆಸ್ ವಿಧಿಸುವ ಸಂಬಂಧದ ಮಹತ್ವದ ಮಸೂದೆಯನ್ನು ಮಂಡಿಸಲಿದ್ದಾರೆ. ಜಿಎಸ್ಟಿ ದರ ಕಡಿತದ ನಂತರವೂ ಈ ಉತ್ಪನ್ನಗಳ ಬೆಲೆ ಇಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಈ ಉತ್ಪನ್ನಗಳ ಮೇಲೆ ಸದ್ಯಕ್ಕೆ 2026ರ ಮಾರ್ಚ್ವರೆಗೆ ವಿಧಿಸಲಾಗುತ್ತಿರುವ ಪರಿಹಾರಾತ್ಮಕ ಸೆಸ್ನ ಬದಲು, ಇನ್ನು ಮುಂದೆ ಆರೋಗ್ಯ ಮತ್ತು ಭದ್ರತಾ ಸೆಸ್ ರೂಪದಲ್ಲಿ ಸುಂಕ ವಿಧಿಸಲು ಸರ್ಕಾರ ತೀರ್ಮಾನಿಸಿದೆ. ಈ ಹೊಸ ಸುಂಕವನ್ನು ವಿಧಿಸುವುದರ ಹಿಂದ
Dec 11 min read


ಕೋಣಿ ಗ್ರಾಮದಲ್ಲಿ ಅಪಘಾತ: ಮೂವರಿಗೆ ಗಾಯ
ಕೋಣಿ ಗ್ರಾಮದ ಎಚ್ಎಂಟಿ ಕ್ರಾಸ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮತ್ತು ರಿಕ್ಷಾದಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಈ ಘಟನೆಯು ನಿನ್ನೆ, ಸೋಮವಾರ ಮಧ್ಯಾಹ್ನ ಸುಮಾರು 3:30 ರ ಸುಮಾರಿಗೆ ನಡೆದಿದೆ. ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಂದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಅಪಘಾತಕ್ಕೆ ಆಟೋ ರಿಕ್ಷಾ ಚಾಲಕನ ಅಜಾಗರೂಕತೆ ಕಾರಣ ಎಂದು ತಿಳಿದುಬಂದಿದೆ. ಬಸ್ರೂರು ಪೇಟೆ ಕಡೆಯಿಂದ ಮೂರುಕೈ ಕಡೆಗೆ ಬರುತ್ತಿದ್ದ ಬೈಕ್ (KA 20 EB 6656) ಇದ್ದಕ್ಕಿದ್ದಂತೆ ಸೂಚನೆ ನೀಡದೆ ರಸ್ತೆಯಲ್ಲಿ ತಿರುಗಿಸಿದ ರಿಕ್ಷಾ (KA
Dec 11 min read
Archive
bottom of page


