;
top of page

​ಕುಮಾರಧಾರೆಯ ಒಡಲಲ್ಲಿ 'ವಿಷದ' ಕಣ್ಣೀರು: ಶಾಸಕ ಅಶೋಕ್ ರೈ ಅವರ ಮತ್ಸ್ಯ ಕನಸಿಗೆ ಮಾಲಿನ್ಯದ ಮೃತ್ಯುಪಾಶ!

  • 35 minutes ago
  • 1 min read


​ಕುದ್ಮಾರು/ಆಲಂಕಾರು: ಪವಿತ್ರ ಕುಮಾರಧಾರ ನದಿಯು ಇಂದು ಮಾಲಿನ್ಯದ ದವಡೆಗೆ ಸಿಲುಕಿ ನಲುಗುತ್ತಿದೆ. ಕುದ್ಮಾರು ಮತ್ತು ಆಲಂಕಾರು ಗ್ರಾಮಗಳ ಜೀವನಾಡಿಯಾಗಿರುವ ಈ ನದಿಯು ಶಾಂತಿಮೊಗರು ಚೆಕ್ ಡ್ಯಾಂ ಬಳಿ ಕಿಡಿಗೇಡಿಗಳು ಎಸೆಯುತ್ತಿರುವ ತ್ಯಾಜ್ಯದಿಂದಾಗಿ ಸಾಕ್ಷಾತ್ ನರಕಸದೃಶವಾಗಿದೆ. ಇದು ಕೇವಲ ಪರಿಸರ ಮಾಲಿನ್ಯವಲ್ಲ, ಸಾವಿರಾರು ಭಕ್ತರ ಧಾರ್ಮಿಕ ಶ್ರದ್ಧೆ ಹಾಗೂ ಶಾಸಕರ ಮಹತ್ವಾಕಾಂಕ್ಷಿ ಅಭಿವೃದ್ಧಿ ಯೋಜನೆಗೆ ಬಿದ್ದಿರುವ ದೊಡ್ಡ ಪೆಟ್ಟು.


​25 ಲಕ್ಷ ಮೀನುಗಳ ಭವಿಷ್ಯ ಮರೀಚಿಕೆ?


​ಪುತ್ತೂರು ಶಾಸಕರಾದ ಶ್ರೀ ಅಶೋಕ್ ರೈ ಅವರು ನದಿಯ ಪುನಶ್ಚೇತನಕ್ಕಾಗಿ ನೆಕ್ಕಿಲಾಡಿ ಭಾಗದಲ್ಲಿ ಲಕ್ಷಾಂತರ ಮೀನು ಮರಿಗಳನ್ನು ಬಿಟ್ಟಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಈ ಮೀನುಗಳ ಸಂಖ್ಯೆಯನ್ನು 25 ಲಕ್ಷಕ್ಕೆ ಏರಿಸಿ, ನದಿಯನ್ನು ಮತ್ಸ್ಯ ಸಮೃದ್ಧಗೊಳಿಸುವ ಕನಸು ಅವರದ್ದಾಗಿತ್ತು. ಆದರೆ, ಶಾಂತಿಮೊಗರು ಡ್ಯಾಂನಲ್ಲಿ ಸಂಗ್ರಹವಾಗಿರುವ ಮಾಂಸದ ತ್ಯಾಜ್ಯ, ಬಳಸಿದ ಪ್ಯಾಂಪರ್ಸ್‌ಗಳು ಮತ್ತು ನೀರಿನ ಮೇಲಿರುವ ದಪ್ಪನೆಯ ಎಣ್ಣೆ ಪಸೆ (Oil Layer) ನದಿಯ ಆಮ್ಲಜನಕವನ್ನು ಹೀರುತ್ತಿದೆ. ಈ ವಿಷಪೂರಿತ ನೀರು ಕೆಳಭಾಗಕ್ಕೆ ಹರಿದರೆ, ಶಾಸಕರು ಬಿಟ್ಟಿರುವ ಲಕ್ಷಾಂತರ ಮೀನುಗಳು ಉಸಿರುಗಟ್ಟಿ ಸಾವನ್ನಪ್ಪುವುದು ಖಚಿತ.

​ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವರ ಜಲಕಕ್ಕು ಧಕ್ಕೆ!!

​ಮುಂಬರುವ ಒಂದು ತಿಂಗಳ ಅವಧಿಯಲ್ಲಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪವಿತ್ರ ಜಲಕ ಸ್ಥಾನ, (ಅವಭೃತ ಸ್ನಾನ) ಇದೇ ನದಿಯ ಗಡಿ ಭಾಗದಲ್ಲಿ ನಡೆಯಲಿದೆ. ಭಕ್ತರು ಪವಿತ್ರವೆಂದು ಭಾವಿಸಿ ಮುಳುಗು ಹಾಕುವ ಜಾಗದಲ್ಲಿ ಇಂದು ರಾಶಿ ಪ್ಲಾಸ್ಟಿಕ್ ಹಾಗೂ ಕೊಳೆತ ಮಾಂಸದ ತ್ಯಾಜ್ಯಗಳು ತೇಲುತ್ತಿವೆ. ದೈವಿಕ ಕಾರ್ಯಗಳು ನಡೆಯಬೇಕಾದ ಜಾಗದಲ್ಲಿ ಇಂತಹ ಅಶುದ್ಧತೆ ಕಂಡುಬರುತ್ತಿರುವುದು ಭಕ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

​ ಯಾರದ್ದು ಜವಾಬ್ದಾರಿ? ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ

​ಈ ಭೀಕರ ಮಾಲಿನ್ಯಕ್ಕೆ ಸ್ಥಳೀಯ ಗ್ರಾಮ ಪಂಚಾಯತ್ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎದ್ದು ಕಾಣುತ್ತಿದೆ.

ರಾಶಿ ಪ್ಲಾಸ್ಟಿಕ್ ಹಾಗೂ ಕೊಳೆತ ಮಾಂಸದ ತ್ಯಾಜ್ಯಗಳು ತೇಲುತ್ತಿವೆ.

​ಸೇತುವೆಯ ಬಳಿ ಸಿಸಿಟಿವಿ ಅಳವಡಿಸದಿರುವುದು ಕಿಡಿಗೇಡಿಗಳಿಗೆ ವರದಾನವಾಗಿದೆ.

​ಎಣ್ಣೆ ಪಸೆ ಮತ್ತು ವಿಷಕಾರಿ ತ್ಯಾಜ್ಯ ಹರಿಯುತ್ತಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ ಮೌನವಾಗಿದೆ.


ಗ್ರಾಮಸ್ಥರ ಆಗ್ರಹ: "ಶಾಸಕ ಅಶೋಕ್ ರೈ ಅವರು ತಕ್ಷಣ ಮಧ್ಯಪ್ರವೇಶಿಸಿ ತಮ್ಮ ಕನಸಿನ ಮೀನುಗಾರಿಕಾ ಯೋಜನೆಯನ್ನು ರಕ್ಷಿಸಬೇಕು ಹಾಗೂ ಶರವೂರು ದೇವಸ್ಥಾನದ ಜಲಕ ಸ್ಥಾನದ ಮುನ್ನ ನದಿಯನ್ನು ಸಂಪೂರ್ಣ ಶುದ್ಧೀಕರಿಸಬೇಕು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ನದಿಯನ್ನು ಸ್ವಚ್ಛಗೊಳಿಸಬೇಕು ಮತ್ತು ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.."








Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page