ವಯನಾಡ್ ಸುರಂಗ ರಸ್ತೆ ದುರಂತ: ಮೂವರ ಸಾವು, ಐವರಿಗಾಗಿ ಹುಡುಕಾಟ
- Jul 8
- 1 min read

ಕೇರಳದ ಮೆಪ್ಪಾಡಿ ಕಲ್ಲಾಡಿ ಬಳಿಯ ಸುರಂಗ ರಸ್ತೆ ಕಾಮಗಾರಿ ಸ್ಥಳದಲ್ಲಿ ಸಂಭವಿಸಿದ ಭೀಕರ ಗುಡ್ಡಕುಸಿತದಲ್ಲಿ ಮೂವರು ಸಾವನ್ನಪ್ಪಿದ್ದು, ಐವರು ನಾಪತ್ತೆಯಾಗಿದ್ದಾರೆ. ಮೃತರನ್ನು ಚಂದ್ರಬಾನ್, ಬಿಕಾಶ್ ಕುಮಾರ್ ಮತ್ತು ಅನ್ಮೋಲ್ ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ನಾಪತ್ತೆಯಾಗಿರುವ ವಿಕ್ರಮ್ ರಾಣಾ, ರಾಹುಲ್, ಮೊಹಮ್ಮದ್ ಇಮ್ರಾನ್, ರಾಕೇಶ್ ಹಾಗೂ ಅಜರುದ್ದೀನ್ ಅವರಿಗಾಗಿ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ನ 200ಕ್ಕೂ ಹೆಚ್ಚು ಸಿಬ್ಬಂದಿ ಬಿರುಸಿನ ಶೋಧ ನಡೆಸುತ್ತಿದ್ದಾರೆ. ಆದರೆ, ನಿರಂತರ ಮಳೆಯು ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಪಡಿಸುತ್ತಿದೆ.
ದುರಂತದ ವೇಳೆ ಕರ್ನಾಟಕದ ರಾಮನಗರದ ನೋಂದಣಿಯ ವಾಟರ್ ಟ್ಯಾಂಕರ್ ಅಡ್ಡ ಸಿಕ್ಕಿದ್ದರಿಂದ ಹಲವರ ಜೀವ ಉಳಿದಿದೆ. ಇನ್ನು ಕಲ್ಲಾಡಿ ಸುತ್ತಮುತ್ತ ಭೂಕುಸಿತದ ಭೀತಿ ಹೆಚ್ಚಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆಸುಪಾಸಿನ 23 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.







Comments