ಕುದ್ಮಾರು ಬೇರಿಕೆಯಲ್ಲಿ ನಾಳೆ ಶ್ರೀ ಕೊರಗಜ್ಜ ದೈವಸ್ಥಾನದ ಹರಕೆ ನೇಮೋತ್ಸವ

ಕುದ್ಮಾರು: ಇಲ್ಲಿನ ಬೇರಿಕೆಯ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ಮತ್ತು ಕೊರಗಜ್ಜ ದೈವಸ್ಥಾನದಲ್ಲಿ 2026ರ ಸೆಪ್ಟೆಂಬರ್ 19ರ ಶನಿವಾರದಂದು ಹರಕೆ ನೇಮೋತ್ಸವವು ಶ್ರದ್ಧಾ ಭಕ್ತಿಗಳಿಂದ ನೆರವೇರಲಿದೆ.
ಸಂಜೆ 4:00 ಗಂಟೆಗೆ ದೈವಕ್ಕೆ ಎಣ್ಣೆ ಕೊಡುವ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6:00 ಗಂಟೆಯಿಂದ ಹರಕೆ ನೇಮಗಳು ಆರಂಭಗೊಳ್ಳಲಿವೆ. ರಾತ್ರಿ 8:00 ಗಂಟೆಗೆ ಹರಕೆ ಹಾಗೂ ಕರಿಗಂಧ ಪ್ರಸಾದ ವಿತರಣೆ ಮತ್ತು 8:30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ.
ವಿಶೇಷವಾಗಿ 9 ಹರಕೆ ನೇಮಗಳು ಏಕಕಾಲದಲ್ಲಿ ನಡೆಯಲಿದ್ದು, ಉಮೇಶ್ ಕೆ.ಎನ್., ಧರ್ಣಪ್ಪಗೌಡ, ರಮೇಶ್ ಕೆ.ಎನ್., ಶೇಖರ ಗೌಡ, ಅಶ್ವಿತಾ-ಕಾರ್ತಿಕ್, ಚೆನ್ನಪ್ಪ ಗೌಡ, ಕುಶಾಲಪ್ಪ ಗೌಡ, ಶಿವರಾಮ ಗೌಡ ಹಾಗೂ ಜಯಂತ್ ಸುವರ್ಣ ಕುಟುಂಬಸ್ಥರು ಹರಕೆ ನೇಮ ಸೇವೆ ನೀಡಲಿದ್ದಾರೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತಾದಿಗಳಿಗೆ ಆಡಳಿತ ಮಂಡಳಿಯು ಆದರದ ಸ್ವಾಗತ ಕೋರಿದೆ.







Comments