ಸ್ನೇಹಿತರ ಬಳಗ (ರಿ.) ಕಲ್ಪಡ ವತಿಯಿಂದ ದಶಮ ಸಂಭ್ರಮ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಮತ್ತು ಪುಸ್ತಕ ವಿತರಣೆ
- Jun 1
- 1 min read

ಕೊಡಿಯಾಲ, ಜೂನ್ 1:
ಸ್ನೇಹಿತರ ಬಳಗ (ರಿ.) ಕಲ್ಪಡವು ತನ್ನ ದಶಮ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಅದರ ಅಂಗವಾಗಿ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದೆ. ಈ ಪ್ರಯುಕ್ತ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೂವಪ್ಪೆ ಇಲ್ಲಿನ 2026-27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್ಗಳು, ಪುಸ್ತಕಗಳು ಹಾಗೂ ಪೆನ್-ಪೆನ್ಸಿಲ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷರಾದ ಸುರೇಶ್ ಗುತ್ತು, ಗೌರವಾಧ್ಯಕ್ಷರಾದ ಶಿವರಾಮ ಉಪಾಧ್ಯಾಯ, ಗೌರವ ಸಲಹೆಗಾರರಾದ ಚಿದಾನಂದ ಉಪಾಧ್ಯಾಯ ಉಪಸ್ಥಿತರಿದ್ದರು. ಸಂಚಾಲಕರಾದ ಕೇಶವ ಕಲ್ಪಡ ತೋಟ, ಸಹ ಸಂಚಾಲಕರಾದ ಯುವರಾಜ್ ಕೆ, ಕಾರ್ಯದರ್ಶಿಗಳಾದ ಸುಜಿತ್ ಕೆ ಹಾಗೂ ಲೋಕೇಶ್ ಕೆ.ವಿ. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. ಜೊತೆಗೆ ಸದಸ್ಯರಾದ ಧರ್ಮಪಾಲ, ರಮೇಶ್ ಇಪ್ಪುಳ್ತಡಿ, ಗಣೇಶ್ ಹಾಗೂ ಪ್ರಸಾದ್ ಕಲ್ಪಡ ಸಹ ಭಾಗವಹಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕರಾದ ನಿರ್ಮಲ ಕೆ.ಎಸ್., ಶಿಕ್ಷಕರಾದ ನಿವೇದಿತಾ, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದು, ಬಳಗದ ಈ ಸಮಾಜಪರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಅಗತ್ಯವಾದ ಶಿಕ್ಷಣ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವ ಮೂಲಕ ಸ್ನೇಹಿತರ ಬಳಗವು ಸಮಾಜದ ಕಡೆ ತನ್ನ ಬದ್ಧತೆಯನ್ನು ತೋರಿಸಿದೆ.







Comments