ಬೆಟ್ಟಂಪಾಡಿ: (ಅ .28) ಬೆಟ್ಟಂಪಾಡಿ-ಕೌಡಿಚ್ಚಾರು ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಕೆಎಸ್ಆರ್ಟಿಸಿ (KSRTC) ಬಸ್ಸು ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ತುಂಬಿದ್ದರಿಂದಾಗಿ ರಸ್ತೆಯ ಮಧ್ಯಭಾಗದ ಏರು ದಾರಿಯಲ್ಲಿ ನಿಂತು ಹೋದ ಘಟನೆ ವರದಿಯಾಗಿದೆ. ಬೆಟ್ಟಂಪಾಡಿ-ಕೌಡಿಚ್ಚಾರು ಮಾರ್ಗದಲ್ಲಿ ಸಾಗುತ್ತಿದ್ದ ಈ ಬಸ್ನ ಸಾಮರ್ಥ್ಯಕ್ಕೆ ಮೀರಿದ ಜನರ ಸಾಗಾಟ ಇತ್ತು. ಇದರಿಂದ ಬಸ್ ಮುಂದಕ್ಕೆ ಚಲಿಸಲು ಸಾಧ್ಯವಾಗದೆ ದಾರಿಯ ಮಧ್ಯೆ ನಿಂತಿತು. ಬಸ್ ಮಧ್ಯೆ ನಿಂತ ಕಾರಣ, ಪ್ರತಿದಿನ ಈ ಮಾರ್ಗದಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಇತರ ಪ್ರಯಾಣಿಕರು ತೀವ್ರವಾಗಿ ಪರದಾಡಬೇಕಾಯಿತು. ಈ ಪ್ರದೇಶಕ್ಕೆ
ಗಡಿ ಭದ್ರತಾ ಪಡೆ (BSF) ಕ್ರೀಡಾ ಕೋಟಾದಡಿ 391 ಕಾನ್ಸ್ಟೆಬಲ್ ಗ್ರೂಪ್ 'C' ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಮೆಟ್ರಿಕ್ಯುಲೇಷನ್ ವಿದ್ಯಾರ್ಹತೆ ಹೊಂದಿರುವ 18-23 ವರ್ಷದ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು. ರಾಷ್ಟ್ರೀಯ/ಅಂತರರಾಷ್ಟ್ರೀಯ ಪದಕ ವಿಜೇತರು/ಭಾಗವಹಿಸಿದವರು ಅರ್ಹರು. ಆನ್ಲೈನ್ ಅರ್ಜಿ ಸಲ್ಲಿಕೆ ನವೆಂಬರ್ 4ರವರೆಗೆ. ಲಿಖಿತ ಪರೀಕ್ಷೆ ಇಲ್ಲ; ದೈಹಿಕ ಮತ್ತು ಕ್ರೀಡಾ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಗಡಿ ಭದ್ರತಾ ಪಡೆ (BSF), ಕ್ರೀಡಾ ಕೋಟಾದಡಿಯಲ್ಲಿ ಗ್ರೂಪ್ ‘C’ ಅಡಿಯಲ್ಲಿ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾ
ಹೊಸ ಕಾರಿನ ಪಬ್ಲಿಸಿಟಿಗೆ ದೈವದ ವೇಷ - ಎತ್ತ ಸಾಗುತ್ತಿದೆ ನಮ್ಮ ಕರಾವಳಿ ಸಂಸ್ಕೃತಿ? ಕರಾವಳಿ ಸಂಸ್ಕೃತಿಯ ಜೀವಾಳವಾದ ದೈವಾರಾಧನೆಯನ್ನು ಕೆಲವರು ಮನರಂಜನೆಗಾಗಿ ದುರುಪಯೋಗ ಪಡಿಸುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕಾಂತಾರ ಚಿತ್ರ ಬಿಡುಗಡೆಯಾದ ಬಳಿಕ ದೈವದ ವೇಷಭೂಷಣ, ಕೂಗು-ಅರಚಾಟ ಹಾಗೂ ನೃತ್ಯ ಶೈಲಿಯನ್ನು ಅನುಕರಿಸುತ್ತಾ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋಗಳನ್ನು ಹಾಕುತ್ತಿರುವುದು ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತಾಗಿ ಅನೇಕ ದೈವ ನರ್ತಕರು ಹಾಗೂ ದೈವಾರಾಧಕರು ಈಗಾಗಲೇ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂತಾರ ಚಿತ್ರದ ಕುರಿತು ಕೂಡ ಕ
"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.