ಮೀಸಲು ಕ್ಷೇತ್ರದ ಅಂಬೇಡ್ಕರ್ ಭವನ ಅನೈತಿಕ ಚಟುವಟಿಕೆಗಳಿಗೆ ಮೀಸಲೇ?

ಹೌದು, ಸುಳ್ಯ ವಿಧಾನಸಭಾ ಕ್ಷೇತಮೀಸಲುಕ್ಷೇತ್ರ.ಹಾಗೆಯೇ ಸುಳ್ಯತಾಲ್ಲೂಕುಅಭಿವೃದ್ಧಿವಿಚಾರದಲ್ಲಿ ಬಹಳ ಹಿಂದಿನಿಂದಲೂ ಹಿಂದೆ ಉಳಿದಿದೆ ಎನ್ನುವುದಕ್ಕೆ ಇಲ್ಲಿನ ಅಂಬೇಡ್ಕರ್ ಭವನ ಸಾಕ್ಷಿ. ..

ಸುಮಾರು 16 ವರ್ಷಗಳ ಹಿಂದೆ ಶಂಕುಸ್ಥಾಪನೆಗೊಂಡ ಅಂಬೇಡ್ಕರ್ ಭವನ ಇನ್ನು ಪೂರ್ಣಗೊಳ್ಳಲಿಲ್ಲ ಎನ್ನುವುದು ವಿಪರ್ಯಾಸವೇ ಸರಿ. ಸುಳ್ಯದ ಅಂಬೇಟಡ್ಕ ಬಳಿಯಲ್ಲಿ ಹಲವಾರು ಕೋಟಿ ರೂಪಾಯಿಯ ಯೋಜನೆ ಇನ್ನೂ ಪೂರ್ಣಗೊಳ್ಳಲಿಲ್ಲ. ಜನಸಾಮಾನ್ಯರ ತೆರಿಗೆಯ ಕೋಟಿ ಕೋಟಿ ರೂಪಾಯಿ ಅನೈತಿಕ ಚಟುವಟಿಕೆಗಳಿಗೆ ಉಪಯೋಗವಾಗುತ್ತಿದೆ.


ಬಹಳ ದೊಡ್ಡಮಟ್ಟದ ಕಟ್ಟಡ ಕೇವಲ ಒಂದು ಹಂತದಲ್ಲಿ ನಿರ್ಮಾಣಗೊಂಡಿದೆ. ದೊಡ್ಡ ದೊಡ್ಡ ಪಿಲ್ಲರ್ ಗಳು ಅನುದಾನವನ್ನು ಹುಡುಕುತ್ತಾ ಕಾಯುತ್ತಿದೆ. .. ಕಾಡುಗಳಿಂದ ಅವರಿಸಿರುವ ಈ ಅಂಬೇಡ್ಕರ್ ಭವನವನ್ನು ವರುಷಕ್ಕೊಮ್ಮೆ ಸ್ವಚ್ಛಗೊಳಿಸಲಾಗುತ್ತಿದೆ . ಅದೆಷ್ಟೋ ಸಂಘಟನೆಗಳು ಮನವಿ ಮಾಡಿವೆ. ಪ್ರತಿಭಟನೆ ಮಾಡುತ್ತಿವೆ. ಚುನಾವಣೆ ಸಮಯದಲ್ಲಿ ಜನಪ್ರತಿನಿದಿಗಳು ಕಾಮಗಾರಿ ಪೂರ್ಣಗೊಳ್ಳುವ ಸುಳ್ಳು ಭರವಸೆಯನ್ನು ನೀಡುವುದನ್ನು ಮುಂದುವರಿಸಿಕೊಂಡೆ ಬಂದಿದ್ಧಾರೆ. ಯಾರೇ ಅಧಿಕಾರಿ ಬಂದರು ಯಾವುದೇ ಸರ್ಕಾರ ಬಂದರು ಸುಳ್ಯದ ಅಂಬೇಡ್ಕರ್ ಭವನ ನಿರ್ಮಾಣಗೊಳ್ಳುವುದು ಕನಸಿನ ಮಾತಾಗಿ ಉಳಿದಿದೆ. ಜಾಗದ ಸಮಸ್ಯೆಯೋ, ಜನಪ್ರತಿನಿಧಿಗಳ ಬೇಜವಾಬ್ಧಾರಿಯೋ, ಅಧಿಕಾರಿಗಳ ನಿರಾಸಾಕ್ತಿಯೋ ಗೊತ್ತಿಲ್ಲ. ಮುಂದಿನ ದಿನಗಲ್ಲಲಾದರೂ ಮೀಸಲು ಕ್ಷೇತ್ರದ ಅಂಬೇಡ್ಕರ್ ಭವನ ನಿರ್ಮಾಣಗೊಳ್ಳಲಿ ಎನ್ನುವುದೇ ಸುಳ್ಯದ ಜನರ ಆಶಯ. .







Comments