ಶಬರಿಮಲೆಯಲ್ಲಿ ಇನ್ಮುಂದೆ ದಿನಕ್ಕೆ 5 ಪಡಿಪೂಜೆ: ಹೊಸ ಬುಕಿಂಗ್ಗೆ ದೇವಸ್ವಂ ಮಂಡಳಿ ಮಹತ್ವದ ನಿರ್ಧಾರ

ಶಬರಿಮಲೆ: ಶಬರಿಮಲೆಯ ಅತ್ಯಂತ ಪವಿತ್ರ ಪಡಿಪೂಜೆ ಬುಕಿಂಗ್ ಕುರಿತು ತಿರುವಾಂಕೂರು ದೇವಸ್ವಂ ಮಂಡಳಿಯು ಪ್ರಮುಖ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ದೇವಾಲಯದಲ್ಲಿ ದಿನಕ್ಕೆ ಐದು ಪಡಿಪೂಜೆಗಳನ್ನು ನೆರವೇರಿಸಲು ನಿರ್ಧರಿಸಲಾಗಿದ್ದು, ಈ ಕುರಿತು ಕೇರಳ ಹೈಕೋರ್ಟ್ನ ದೇವಸ್ವಂ ಪೀಠಕ್ಕೆ ಮಾಹಿತಿ ನೀಡಲಾಗಿದೆ.
ಪ್ರಸ್ತುತ ಕಾಯ್ದಿರಿಸಲಾದ ಪೂಜೆಗಳು ಮುಗಿದ ನಂತರವಷ್ಟೇ ಹೊಸ ಬುಕಿಂಗ್ಗಳನ್ನು ಸ್ವೀಕರಿಸಲಾಗುವುದು ಎಂದು ಮಂಡಳಿ ತಿಳಿಸಿದೆ. ಅಲ್ಲದೆ, ಈಗಾಗಲೇ ಬುಕ್ ಮಾಡಿರುವ ಭಕ್ತರ ವಿವರಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದ್ದು, ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಿಂದ ತೆರವುಗೊಳಿಸಲಾಗುತ್ತಿದೆ.
ಅಯ್ಯಪ್ಪ ಸ್ವಾಮಿಯ 18 ಪವಿತ್ರ ಮೆಟ್ಟಿಲುಗಳಿಗೆ ನೆರವೇರಿಸುವ ಪಡಿಪೂಜೆಯು ಶಬರಿಮಲೆಯ ಪ್ರಮುಖ ಧಾರ್ಮಿಕ ವಿಧಿವಿಧಾನಗಳಲ್ಲಿ ಒಂದಾಗಿದೆ.







Comments