ಪ್ರಜ್ವಲ್ ರೇವಣ್ಣ ಜೈಲು ಮೊಬೈಲ್ ರಹಸ್ಯ ಬಯಲು: 7 ಜನರ ವಿರುದ್ಧ ಎಫ್ಐಆರ್!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಕ್ರಮವಾಗಿ ಬಳಸಿದ್ದ ಮೊಬೈಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳಾಟಕ್ಕೆ ಸಾಥ್ ನೀಡಿದ ಏಳು ಜನರ ವಿರುದ್ಧ ಪ್ರಸ್ತುತ ಕೇಸ್ ದಾಖಲಾಗಿದೆ.
ಪೊಲೀಸರ ತನಿಖೆಯಲ್ಲಿ ಈ ಪ್ರಕರಣದ ಲಿಂಕ್ ಡಿಜೆ ಹಳ್ಳಿಗೆ ತಲುಪಿದ್ದು, ಪ್ರತಾಪ್ ರಾವ್, ತೌಸಿಪ್, ಸಿದ್ದಿಕ್, ಪ್ರಕಾಶ್ ಹಾಗೂ ಮಂಜುನಾಥ್ ಸೇರಿದಂತೆ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜೈಲಿನಲ್ಲಿ ಪರಿಚಯವಾಗಿದ್ದ ಗಲಭೆ ಪ್ರಕರಣದ ಆರೋಪಿಗಳಿಂದ ಪ್ರಜ್ವಲ್ 1 ಲಕ್ಷ ರೂ.ಗೆ ಮೊಬೈಲ್ ಹಾಗೂ 50 ಸಾವಿರ ರೂ.ಗೆ ಸಿಮ್ ಪಡೆದಿದ್ದರು ಎನ್ನಲಾಗಿದೆ. ಆಂಧ್ರದ ಪುಂಗನೂರಿನಿಂದ ತಂದಿದ್ದ ಈ ಸಿಮ್ ಮೂಲಕ ಅವರು ಹಲವು ಯುವತಿಯರು ಹಾಗೂ ಕುಟುಂಬಸ್ಥರಿಗೆ ಕರೆ ಮಾಡಿದ್ದು ಕಾಲ್ ಡಿಟೇಲ್ಸ್ನಿಂದ ತಿಳಿದುಬಂದಿದೆ.







Comments