ತಡರಾತ್ರಿ ಭೂಕುಸಿತ: ಪ್ರಯಾಣಿಕರ ನೆರವಿಗೆ ಧಾವಿಸಿ ಸೈ ಎನಿಸಿಕೊಂಡ ಸಂಸದ ಬ್ರಿಜೇಶ್ ಚೌಟ

ಸುಬ್ರಹ್ಮಣ್ಯ - ಸಕಲೇಶಪುರ ಮಧ್ಯೆ ತಡರಾತ್ರಿ ಭೂಕುಸಿತ ಸಂಭವಿಸಿ ರೈಲು ಸಂಚಾರ ಸಂಪೂರ್ಣ ಅಡಚಣೆಗೊಂಡಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ರೈಲ್ವೆ ಸಚಿವಾಲಯ ಮತ್ತು ನೈಋತ್ಯ ರೈಲ್ವೆ ಅಧಿಕಾರಿಗಳ ಗಮನಕ್ಕೆ ವಿಚಾರ ತಂದರು.

ಪ್ರಯಾಣಿಕರು ಸುರಕ್ಷಿತವಾಗಿ ತಮ್ಮ ಊರುಗಳನ್ನು ತಲುಪಲು ಬದಲಿ ಸಾರಿಗೆ ವ್ಯವಸ್ಥೆ ಕಲ್ಪಿಸಿದರು. ಕೊನೆಯವರೆಗೆ ಸ್ಥಳದಲ್ಲೇ ನಿಂತು ಆಪತ್ಭಾಂದವನಂತೆ ಸಹಾಯ ಮಾಡಿದ ಅವರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ.
ಸಂಸದರ ಈ ತ್ವರಿತ ಸ್ಪಂದನೆಗೆ ಪ್ರಯಾಣಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದು, 'ನಮ್ಮ ಸಂಸದರು ನಮ್ಮ ಹೆಮ್ಮೆ' ಎಂದು ಹಾರೈಸಿದ್ದಾರೆ.







Comments