ಮಹಿಳೆಯರಿಗೆ ಗೌರವ ನೀಡಿ, ನಿಂದಿಸಿದರೆ ಕಾನೂನು ಕ್ರಮ: ಉದಯನಿಧಿಗೆ ಸಿಎಂ ವಿಜಯ್ ಎಚ್ಚರಿಕೆ

ರಾಜಕೀಯ ಟೀಕೆಗಳ ನೆಪದಲ್ಲಿ ಮಹಿಳೆಯರನ್ನು ನಿಂದಿಸುವುದನ್ನು ಸಹಿಸುವುದಿಲ್ಲ ಎಂದು ಸಿಎಂ ಜೋಸೆಫ್ ವಿಜಯ್ ಎಚ್ಚರಿಸಿದ್ದಾರೆ. ನಟಿ ತ್ರಿಷಾ ಕುರಿತು ಆಕ್ಷೇಪಾರ್ಹವಾಗಿ ಮಾತನಾಡಿದ್ದ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ಗೆ ಪರೋಕ್ಷವಾಗಿ ತಿರುಗೇಟು ನೀಡಿದ ಅವರು, "ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಮಹಿಳೆಯರಿಗೆ ಅಗೌರವ ತೋರಬೇಡಿ. ಸರ್ಕಾರದ ಯೋಜನೆಗಳನ್ನು ಟೀಕಿಸಿ, ಆದರೆ ವೈಯಕ್ತಿಕ ನಿಂದನೆ ಬೇಡ," ಎಂದರು. ಜಯಲಲಿತಾ ಅವರಿಗೆ ಆದ ಅವಮಾನವನ್ನು ನೆನಪಿಸಿಕೊಂಡು, ಮಹಿಳೆಯರ ಮಾನಹಾನಿ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.







Comments