;
top of page

ತಿರುಮಲ ದೇವಸ್ಥಾನದಲ್ಲಿ 'ನಕಲಿ ರೇಷ್ಮೆ ದುಪ್ಪಟ್ಟಾ' ಹಗರಣ: ಭಕ್ತರಿಗೆ ಆಘಾತ!

  • Writer: sathyapathanewsplu
    sathyapathanewsplu
  • 6 days ago
  • 1 min read
ree

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮತ್ತೊಂದು ಬೃಹತ್ ಹಗರಣದ ಸುಳಿಯಲ್ಲಿ ಸಿಲುಕಿದೆ. ನಕಲಿ ತುಪ್ಪ ಮತ್ತು ದೇಣಿಗೆ ಕಳ್ಳತನದ ಆರೋಪಗಳ ಬೆನ್ನಲ್ಲೇ, ಇದೀಗ ಟಿಟಿಡಿ ಆಡಳಿತ ಮಂಡಳಿಯು 'ನಕಲಿ ರೇಷ್ಮೆ ದುಪ್ಪಟ್ಟಾ' ಹಗರಣವನ್ನು ಅಧಿಕೃತವಾಗಿ ಆಂಧ್ರಪ್ರದೇಶ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕ್ಕೆ ಹಸ್ತಾಂತರಿಸಿದೆ. ಈ ಹಗರಣದಿಂದಾಗಿ ಭಕ್ತರಲ್ಲಿ ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತವಾಗಿದೆ.

₹54 ಕೋಟಿ ಮೌಲ್ಯದ ವಂಚನೆ

ತನಿಖೆಯಲ್ಲಿ ಬಯಲಾಗಿರುವ ಪ್ರಕಾರ, 2015 ರಿಂದ 2025 ರವರೆಗಿನ ಸುಮಾರು 10 ವರ್ಷಗಳ ಅವಧಿಯಲ್ಲಿ, ತಿಮ್ಮಪ್ಪನ ಸನ್ನಿಧಿಗೆ ಅರ್ಪಿಸಲಾಗುವ ಮತ್ತು ಭಕ್ತರಿಗೆ ವಿತರಿಸಲಾಗುವ ರೇಷ್ಮೆ ದುಪ್ಪಟ್ಟಗಳ ಖರೀದಿಯಲ್ಲಿ ಕೋಟಿಗಟ್ಟಲೆ ರೂಪಾಯಿಗಳ ಅವ್ಯವಹಾರ ನಡೆದಿದೆ. ವಿಜಿಲೆನ್ಸ್ ನಡೆಸಿದ ತನಿಖೆಯಲ್ಲಿ ಸುಮಾರು 54 ಕೋಟಿ ರೂಪಾಯಿ ಮೌಲ್ಯದ ರೇಷ್ಮೆ ದುಪ್ಪಟ್ಟಗಳ ಖರೀದಿಯಲ್ಲಿ ಅಗ್ಗದ ಪಾಲಿಸ್ಟರ್ ವಸ್ತ್ರಗಳನ್ನು 'ಶುದ್ಧ ರೇಷ್ಮೆ ದುಪ್ಪಟ್ಟಗಳೆಂದು' ಪೂರೈಕೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಪರೀಕ್ಷೆಯಲ್ಲಿ ಬಯಲಾಯ್ತು ನಕಲಿ

ಭಕ್ತರಿಗೆ ಕಲ್ಯಾಣ ಮಂಟಪದಲ್ಲಿ ವೇದಪಂಡಿತರಿಂದ ಆಶೀರ್ವಚನ ಪಡೆದ ನಂತರ ನೀಡಲಾಗುತ್ತಿದ್ದ ರೇಷ್ಮೆ ಶಾಲುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅವುಗಳು ಶೇ 100ರಷ್ಟು ಪಾಲಿಸ್ಟರ್‌ನಿಂದ ಮಾಡಲ್ಪಟ್ಟಿರುವುದು ದೃಢಪಟ್ಟಿದೆ. ವರ್ಷಗಳಿಂದ 'ಶುದ್ಧ ರೇಷ್ಮೆ' ಎಂಬ ಹೆಸರಿನಲ್ಲಿ ಅಗ್ಗದ ಮತ್ತು ನಕಲಿ ವಸ್ತ್ರವನ್ನು ಪೂರೈಸಿ ಭಕ್ತರಿಗೆ ಮತ್ತು ದೇವಸ್ಥಾನಕ್ಕೆ ಮೋಸ ಮಾಡಿರುವುದು ಹಗರಣದ ಪ್ರಮಾಣವನ್ನು ಎತ್ತಿ ತೋರಿಸುತ್ತದೆ.

ವಿಆರ್‌ಎಸ್ ಎಕ್ಸ್‌ಪೋರ್ಟ್ಸ್ ನಗರಿ ಸಂಸ್ಥೆಯ ಮೇಲೆ ಆರೋಪ

ಸರ್ಕಾರಿ ಟೆಂಡರ್ ಮೂಲಕ ಶಾಲು ಪೂರೈಕೆಯ ಗುತ್ತಿಗೆಯನ್ನು ಪಡೆದಿದ್ದ ವಿಆರ್‌ಎಸ್ ಎಕ್ಸ್‌ಪೋರ್ಟ್ಸ್ ನಗರಿ ಎಂಬ ಸಂಸ್ಥೆಯು ಕಳೆದ 10 ವರ್ಷಗಳಿಂದ ಈ ವಂಚನೆಯ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ಆರೋಪಿಸಲಾಗಿದೆ.

* ವಿತರಿಸಿದ ದುಪ್ಪಟ್ಟಗಳು: ಸುಮಾರು 15,000

* ಪ್ರತಿ ದುಪ್ಪಟ್ಟಾ ದರ: ₹1389

* ವಂಚನೆಯ ಸ್ವರೂಪ: ರೇಷ್ಮೆ ಎಂದು ಬಿಲ್ ಮಾಡಿ ಪಾಲಿಸ್ಟರ್ ಪೂರೈಕೆ.

ಟಿಟಿಡಿಯ ವಿಜಿಲೆನ್ಸ್ ವಿಭಾಗದ ತನಿಖೆಯಲ್ಲಿ ಎಲ್ಲಾ ಅಂಶಗಳು ದೃಢಪಟ್ಟ ನಂತರ, ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಎಸಿಬಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಟಿಟಿಡಿ ಆಡಳಿತ ಮಂಡಳಿಯು ಈ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

 
 
 

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page